ಸಾರಾಂಶ
ನಗರದ ಪ್ರವಾಸಿ ಮಂದಿರದಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕಳೆದ ಕೆಲವು ದಿನಗಳ ಹಿಂದೆ ನಡೆದ ನೆಹರು ಮಾರುಕಟ್ಟೆಯ ಬಳಿಯ ಬಸ್ ಅಪಘಾತ ಅಲ್ಲಿಯ ಟ್ರಾಫಿಕ್ನ ತೀವ್ರತೆಯನ್ನು ಸೂಚಿಸುತ್ತದೆ. ಅಲ್ಲಿ ನಗರಸಭೆ ಮಳಿಗೆಗಳಿದ್ದು, ಅಲ್ಲಿನ ವ್ಯಾಪಾರಿಗಳನ್ನು ಮಳಿಗೆಗಳಿಗೆ ಸ್ಥಳಾoತರಿಸಬೇಕು. ಕಂದಾಯ ವಸೂಲಿಯ ಗುರಿಯನ್ನು ಸಾಧಿಸುವತ್ತ ಎಲ್ಲರೂ ಕಾರ್ಯೋನ್ಮುಖರಾಗಿ ಬಾಕಿ ಕಂದಾಯವನ್ನು ಶೀಘ್ರವೇ ವಸೂಲಿ ಮಾಡಬೇಕು ಎಂದು ಸೂಚಿಸಿದರು.
ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ
ಕನ್ನಡಪ್ರಭ ವಾರ್ತೆ ಹಿರಿಯೂರುನೆಹರು ಮಾರುಕಟ್ಟೆ ಕಿಷ್ಕಿಂದೆಯಂತಾಗಿದ್ದು, ಆದಷ್ಟು ಬೇಗ ಮಳಿಗೆಯಲ್ಲೇ ವ್ಯಾಪಾರ ಮಾಡಲು ಕ್ರಮ ಕೈಗೊಂಡು ಆ ಭಾಗದ ಟ್ರಾಫಿಕ್ ಸಮಸ್ಯೆ ಬಗೆಹರಿಸಿ ಎಂದು ಸಚಿವ ಡಿ ಸುಧಾಕರ್ ರವರು ನಗರಸಭೆ ಸಿಬ್ಬಂದಿಗಳಿಗೆ ಆದೇಶಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಗರಸಭೆ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕಳೆದ ಕೆಲವು ದಿನಗಳ ಹಿಂದೆ ನಡೆದ ನೆಹರು ಮಾರುಕಟ್ಟೆಯ ಬಳಿಯ ಬಸ್ ಅಪಘಾತ ಅಲ್ಲಿಯ ಟ್ರಾಫಿಕ್ನ ತೀವ್ರತೆಯನ್ನು ಸೂಚಿಸುತ್ತದೆ. ಅಲ್ಲಿ ನಗರಸಭೆ ಮಳಿಗೆಗಳಿದ್ದು, ಅಲ್ಲಿನ ವ್ಯಾಪಾರಿಗಳನ್ನು ಮಳಿಗೆಗಳಿಗೆ ಸ್ಥಳಾoತರಿಸಬೇಕು. ಕಂದಾಯ ವಸೂಲಿಯ ಗುರಿಯನ್ನು ಸಾಧಿಸುವತ್ತ ಎಲ್ಲರೂ ಕಾರ್ಯೋನ್ಮುಖರಾಗಿ ಬಾಕಿ ಕಂದಾಯವನ್ನು ಶೀಘ್ರವೇ ವಸೂಲಿ ಮಾಡಬೇಕು ಎಂದು ಸೂಚಿಸಿದರು.ನಗರದ ಅಭಿವೃದ್ಧಿಗೆ ಕಂದಾಯ ವಸೂಲಿ ಪ್ರಮುಖವಾಗಿದ್ದು ಯಾವುದೇ ಕಾರಣಕ್ಕೂ ಕಂದಾಯ ವಸೂಲಿಯಲ್ಲಿ ಹಿಂದೆ ಬೀಳಬಾರದು. ನಗರದ ಬೀದಿ ದೀಪಗಳ ಸಮಸ್ಯೆ ಗಮನಕ್ಕೆ ಬಂದಿದ್ದು ಬೀದಿದೀಪದ ಸಮಸ್ಯೆಯನ್ನು ಶಾಸಕರ ಅನುದಾನದಲ್ಲೇ ಬಗೆಹರಿಸಲು ಪ್ರಯತ್ನಿಸಲಾಗುವುದು. ಎಲ್ಲಾ ವಾರ್ಡ್ ಗಳ ರಸ್ತೆಯನ್ನು ಪರಿಶೀಲನೆ ನಡೆಸಿ ಅಗತ್ಯವಿರುವ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ. ಕುಡಿಯುವ ನೀರಿನ ಅಭಾವ ನಗರದ ಯಾವ ಭಾಗದಲ್ಲೂ ಆಗಬಾರದು. ಪೌರಕಾರ್ಮಿಕರ ಕೊರತೆಯಾಗದಂತೆ ಆದ್ಯತೆಯ ಮೇರೆಗೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ನಗರ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ. ಜನರು ಕಚೇರಿ ಕೆಲಸಕ್ಕೆ ಅಲೆಯಬಾರದು. ಸದಸ್ಯರು ಸಹ ಜನರ ನಿರೀಕ್ಷೆಯನ್ನು ಹುಸಿಗೊಳಿಸದೇ ಕೆಲಸ ನಿರ್ವಹಿಸಿ. ಜನಸ್ನೇಹಿ ಆಡಳಿತ ನೀಡುವ ಗುರಿ ಎಲ್ಲರದಾಗಿದ್ದು, ಆ ದಿಸೆಯಲ್ಲಿ ಕಾರ್ಯನಿರ್ವಹಿಸಿ. ನಗರ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯ ಒದಗಿಸುವ ಸವಾಲು ಇದೆ. ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಮೂಲಸೌಲಭ್ಯಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು. ಪೌರಾಯುಕ್ತ ಎಚ್.ಮಹoತೇಶ್ ಮಾತನಾಡಿ, ಈಗಾಗಲೇ ಕಂದಾಯ ವಸೂಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ಕಂದಾಯ ವಸೂಲಾತಿ ಮಾಡಲಾಗುತ್ತಿದೆ. ಕುಡಿಯುವ ನೀರಿನ ಪೈಪ್ ಲೈನ್ ಗಳ ದುರಸ್ತಿ ಕಾರ್ಯ ಮಾಡಲಾಗಿದ್ದು, ಸ್ವಚ್ಛ ಕುಡಿಯುವ ನೀರಿನ ಬಳಕೆಯ ಬಗ್ಗೆ ನಗರ ವ್ಯಾಪ್ತಿಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ. ನೆಹರು ಮಾರುಕಟ್ಟೆಯಲ್ಲಿ ಮಳಿಗೆ ಪಡೆದವರು. ಸಹ ಹೊರ ಬಂದು ವ್ಯಾಪಾರ ಮಾಡುತ್ತಿದ್ದು ಅವರನ್ನು ಮತ್ತೆ ಮಳಿಗೆಗೆ ಸ್ಥಳಾoತರಿಸುವ ಕಾರ್ಯವನ್ನು ತುರ್ತಾಗಿ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಈ. ಮಂಜುನಾಥ್, ವಿಠ್ಠಲ್ ಪಾಂಡುರಂಗ, ಈರಲಿಂಗೇಗೌಡ, ಸಣ್ಣಪ್ಪ, ತಿಪ್ಪೇಸ್ವಾಮಿ,ಬಿಎನ್ ಪ್ರಕಾಶ್, ಶಂಷುನ್ನೀಸಾ, ಗುಂಡೇಶ್ ಕುಮಾರ್,ಅಂಬಿಕಾ, ರತ್ನಮ್ಮ ಮುಂತಾದವರು ಹಾಜರಿದ್ದರು. 1,2 ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ಸಭೆ ನಡೆಸಿದರು. ಈ ವೇಳೆ ಪೌರಾಯುಕ್ತ ಹೆಚ್ ಮಹoತೇಶ್ ಹಾಗೂ ನಗರಸಭೆ ಸದಸ್ಯರುಗಳು ಹಾಜರಿದ್ದರು.