ಪ್ರಜಾಪ್ರಭುತ್ವ ಘಾಸಿಗೊಳಿಸಿದ ತುರ್ತು ಪರಿಸ್ಥಿತಿ: ಶ್ರೀಧರ್

| Published : Jun 27 2025, 12:48 AM IST

ಪ್ರಜಾಪ್ರಭುತ್ವ ಘಾಸಿಗೊಳಿಸಿದ ತುರ್ತು ಪರಿಸ್ಥಿತಿ: ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

1975ರಲ್ಲಿ ಅಲಹಾಬಾದ್ ಹೈಕೋರ್ಟಿನ ತೀರ್ಪಿನ ಪ್ರಕಾರ ಲೋಕಸಭಾ ಸದಸ್ಯತ್ವ ಕಳಕೊಂಡ ಇಂದಿರಾ ಗಾಂಧಿ ಕಾಂಗ್ರೆಸ್ ಸರ್ಕಾರದ ಹಂಗಾಮಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕೈಯಿಂದ ಅಧಿಕಾರ ಜಾರಿ ಹೋಗುತ್ತಿದೆ ಎಂದರಿತು ಹೈಕೋರ್ಟ್ ತೀರ್ಪಿನ ವಿರುದ್ಧ ಹಾಗೂ 352ನೇ ವಿಧಿ ದುರ್ಬಳಕೆ ಮಾಡಿಕೊಂಡು 1975ರ ಜೂನ್ 25ರಂದು ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು.

ಧಾರವಾಡ: ತುರ್ತು ಪರಿಸ್ಥಿತಿಗೆ 50ನೇ ವರ್ಷವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಯ ಅಣ್ಣಿಗೇರಿ ಪಿಯು ಕಾಲೇಜಿನಲ್ಲಿ ತುರ್ತು ಪರಿಸ್ಥಿತಿ ಕುರಿತ ವಿಶ್ಲೇಷಣೆ ನಡೆಯಿತು.

ಕರಾಳ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸದಸ್ಯ ಶ್ರೀಧರ್ ನಾಡಿಗೇರ, ಕರಾಳ ಪರಿಸ್ಥಿತಿ, ಪೊಲೀಸರ ದೌರ್ಜನ್ಯ, ಪತ್ರಿಕೆಗಳ ಸಂಪಾದಕರು, ವರದಿಗಾರರ ಹಾಗೂ ಪತ್ರಿಕೆಯ ಮೇಲೆ ದಿಬ್ಬಂದನ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನ ಘಾಸಿಗೊಳಿಸಿದ್ದನ್ನು ವಿವರಿಸಿದರು.

1975ರಲ್ಲಿ ಅಲಹಾಬಾದ್ ಹೈಕೋರ್ಟಿನ ತೀರ್ಪಿನ ಪ್ರಕಾರ ಲೋಕಸಭಾ ಸದಸ್ಯತ್ವ ಕಳಕೊಂಡ ಇಂದಿರಾ ಗಾಂಧಿ ಕಾಂಗ್ರೆಸ್ ಸರ್ಕಾರದ ಹಂಗಾಮಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಕೈಯಿಂದ ಅಧಿಕಾರ ಜಾರಿ ಹೋಗುತ್ತಿದೆ ಎಂದರಿತು ಹೈಕೋರ್ಟ್ ತೀರ್ಪಿನ ವಿರುದ್ಧ ಹಾಗೂ 352ನೇ ವಿಧಿ ದುರ್ಬಳಕೆ ಮಾಡಿಕೊಂಡು 1975ರ ಜೂನ್ 25ರಂದು ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು ಎಂದರು.

ಅಣ್ಣಿಗೇರಿ ಕಾಲೇಜಿನ ಅಧ್ಯಕ್ಷ ನಾಗೇಶ್ ಅಣ್ಣಿಗೇರಿ, ಬಸವರಾಜ ಗರಗ, ಮಂಜುನಾಥ ಮಲ್ಲಿಗವಾಡ, ಪ್ರಮೋದ್ ಕಾರಕೂನ, ಸಂಜೀವ್ ಮಾಳದಕರ್, ಮಂಜುನಾಥ ನೀರಲಕಟ್ಟಿ ಇದ್ದರು. ಈ ಸಂದರ್ಭದಲ್ಲಿ ಶ್ರೀಧರ ನಾಡಗೇರ ಅವರನ್ನು ಗೌರವಿಸಲಾಯಿತು.