ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಮಾನಸ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ನಿಸರ್ಗ ವಿದ್ಯಾನಿಕೇತನದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಹಸಿರಿನ ವಿವಿಧ ವೇಷ ಭೂಷಣ ಧರಿಸಿದ್ದ ಚಿಣ್ಣರ ಕಲರವ ಕಂಡು ಬಂತು.ಸಂಸ್ಥೆಯಲ್ಲಿ ಪ್ರಿ-ಕೆಜಿ, ಎಲ್ ಕೆಜಿ ಹಾಗೂ ಯುಕೆಜಿಯ ನೂರಾರು ವಿದ್ಯಾರ್ಥಿಗಳಿಗೆ ಪರಿಸರದ ದಿನದ ಅಂಗವಾಗಿ ಹಸಿರಿನ ಉಡುಗೆ-ತೊಡುಗೆ ಧರಿಸಿ ಬರಲು ಶಿಕ್ಷಕರು ಸೂಚಿಸಿದ್ದ ಹಿನ್ನೆಲೆ ಪೋಷಕರು ತಮ್ಮ ತಮ್ಮ ಪುಟಾಣಿಗಳಿಗೆ ವಿವಿಧ ರೀತಿಯಲ್ಲಿ ಹಸಿರಿನ ಉಡುಗೆಯಿಂದಲೇ ಮಕ್ಕಳನ್ನು ಶೃಂಗರಿಸಿ ಶಾಲೆಗೆ ಕರೆತಂದಿದ್ದರು. ಈ ಹಿನ್ನೆಲೆ ಹಲವು ಮಕ್ಕಳು ಗಿಳಿ, ಪರಿಸರವನ್ನು ಸಂರಕ್ಷಿಸಿ ಎಂಬಿತ್ಯಾದಿ ಸಂದೇಶ ಬಿತ್ತರಿಸುವ ಉಡುಗೆಯೊಂದಿಗೆ ಅಲಂಕೃತಗೊಂಡು ಗಮನ ಸೆಳೆದರು. ಸಂಸ್ಥೆಯ ಶಿಕ್ಷಕರು ಪರಿಸರ ದಿನಾಚರಣೆ ಹಿನ್ನೆಲೆ ವಿಶೇಷ ರೀತಿ ಶಾಲಾ ಆವರಣದಲ್ಲಿ ಹಸಿರುವ ಚಪ್ಪರ ಮಾದರಿಯಲ್ಲಿ ತಯಾರಿಸಿದ್ದ ಮಾದರಿಯಲ್ಲಿ ಮಕ್ಕಳನ್ನು ನಿಲ್ಲಿಸಿ ಪೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು. ಶಿಕ್ಷಕರು ಮಕ್ಕಳ ಸಂಭ್ರಮದಲ್ಲಿ ಪೋಷಕರು ಪಾಲ್ಗೊಂಡು ಚಿಣ್ಣರ ಕಲರವ ವೀಕ್ಷಿಸಿ ತಲೆದೂಗಿದರು.
ಮುಖ್ಯ ಶಿಕ್ಷಕ ಶಂಕರ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೆ ಮಕ್ಕಳಲ್ಲಿ ಪರಿಸರ ಉಳಿವಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂದು ಪರಿಸರ ದಿನಾಚರಣೆ ಆಯೋಜಿಸಲಾಗಿದೆ. ಇಂದು ನೂರಾರು ಪೋಷಕರು, ಶಿಕ್ಷಕರು ಮಕ್ಕಳ ಸಂಭ್ರಮಕ್ಕೆ ಸಾಕ್ಷಿಯಾಗಿ ಈಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಯನ ಕ್ಲಾರಿಬಲ್, ಸಹ ಮುಖ್ಯಶಿಕ್ಷಕಿ ಗಿರಿಜಾ ಅರುಣ, ಶಿಕ್ಷಕಿಯರಾದ ಪ್ರಿಯಾ, ರಾಜೇಶ್ವರಿ ಶಿವಕುಮಾರ್, ದೀಪ, ರಾಜೇಶ್ವರಿ ಪ್ರಶಾಂತ್ ಇನ್ನಿತರರಿದ್ದರು.28ಕೆಜಿಎಲ್ 2ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ನಿಸರ್ಗ ವಿದ್ಯಾನಿಕೇತನದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ರೀತಿಯ ಹಸಿರಿನ ಉಡುಗೆ ತೊಟ್ಟ ಚಿಣ್ಣರು ಗಮನ ಸೆಳೆದರು.