ಮಂಗಳೂರು: ನಗರದ ಕೊಡಿಯಾಲ್ಬೈಲ್ನಲ್ಲಿರುವ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಪರಿಸರ ದಿನವನ್ನು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಿನ್ಸಿಪಾಲ್, ಉಪನ್ಯಾಸಕರು ಬಸಳೆ ಹಾಗೂ ತೊಂಡೆ ಗಿಡಗಳನ್ನು ನೆಡುವ ಮೂಲಕ ವಿನೂತನ ರೀತಿಯಲ್ಲಿ ಆಚರಿಸಿದರು.ಪ್ರಿನ್ಸಿಪಾಲ್ ಪ್ರೊ.ರಾಮಚಂದ್ರ ಭಟ್ ಮಾತನಾಡಿ, ವಿಶ್ವ ಪರಿಸರ ದಿನದ ಸಮಯದಲ್ಲಿ ಗಿಡ ನೆಟ್ಟು ಮತ್ತೆ ಮರೆತು ಬಿಡುವುದೇ ಹೆಚ್ಚು. ನಮ್ಮ ವಿದ್ಯಾರ್ಥಿಗಳು ಬಸಳೆ, ತೊಂಡೆಕಾಯಿಯನ್ನು ನೆಟ್ಟಿದ್ದು ಮಾತ್ರವಲ್ಲ ನಿತ್ಯನೂ ನೀರು ಹಾಕಿ ಪೋಷಣೆ ಮಾಡುವ ಮೂಲಕ ಹಸಿರು ನಿರಂತರವಾಗಿ ಇರಲಿ ಎನ್ನುವ ಸಂದೇಶ ಸಾರಿದ್ದಾರೆ ಎಂದರು. ಬಳಿಕ ವಿದ್ಯಾರ್ಥಿಗಳು ಸಮೀಪದ ಸಾರ್ವಜನಿಕ ಪಾರ್ಕ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.
ಸಂಯೋಜಕರಾದ ಭೌತಶಾಸ್ತ್ರ ಉಪನ್ಯಾಸಕ ಸೌರಭ್ ಅಂಚನ್, ಕನ್ನಡ ಉಪನ್ಯಾಸಕ ಕರುಣಾಕರ ಬಳ್ಕೂರು, ಹಿಂದಿ ಉಪನ್ಯಾಸಕ ಪ್ರಮೋದ್ ಕಿಣಿ, ಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ರಶ್ಮಿ ಎಚ್. ಸೇರಿದಂತೆ ಇನ್ನಿತರ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಎಕ್ಸ್ಪರ್ಟ್ ಕಾಲೇಜ್: ವಿಶ್ವ ಪರಿಸರ ದಿನಾಚರಣೆ
ಮಂಗಳೂರು: ನಗರದ ಕೊಡಿಯಾಲ್ಬೈಲ್ನಲ್ಲಿರುವ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಪರಿಸರ ದಿನವನ್ನು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಿನ್ಸಿಪಾಲ್, ಉಪನ್ಯಾಸಕರು ಬಸಳೆ ಹಾಗೂ ತೊಂಡೆ ಗಿಡಗಳನ್ನು ನೆಡುವ ಮೂಲಕ ವಿನೂತನ ರೀತಿಯಲ್ಲಿ ಆಚರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.