ಕಳೆದ 20 ವರ್ಷಗಳ ರೆಡ್ ಜೋನ್ ವನವಾಸಕ್ಕೆ ಮುಕ್ತಿ ಸಿಕ್ಕಿತು. ತೊಲಗಿತು, ತೊಲಗಿತು ರೆಡ್ ಜೋನ್ ತೊಲಗಿತು. ನಮ್ಮ ಭೂಮಿ, ನಮ್ಮ ಹಕ್ಕು ನಮಗೆ ಟೌನ್ ಶಿಪ್ ಬೇಕು ಎಂದು ಯೋಜನೆ ಪರ ರೈತರು ಹೇಳಿದರು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ನಾಲ್ಕು ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕೆ ರಾಜ್ಯಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಸುದ್ದಿ ತಿಳಿಯುತ್ತಿದ್ದಂತೆ ಯೋಜನೆ ಪರವಾಗಿರುವ ರೈತರು ಸಿಹಿ ಹಂಚಿ ಸಂಭ್ರಮಿಸಿದರು.

ಬೈರಮಂಗಲ ಶಾಲೆ ಎದುರು ಟೌನ್ ಶಿಪ್ ಯೋಜನೆ ಜಾರಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು.

ಕಳೆದ 20 ವರ್ಷಗಳ ರೆಡ್ ಜೋನ್ ವನವಾಸಕ್ಕೆ ಮುಕ್ತಿ ಸಿಕ್ಕಿತು. ತೊಲಗಿತು, ತೊಲಗಿತು ರೆಡ್ ಜೋನ್ ತೊಲಗಿತು. ನಮ್ಮ ಭೂಮಿ, ನಮ್ಮ ಹಕ್ಕು ನಮಗೆ ಟೌನ್ ಶಿಪ್ ಬೇಕು ಎಂದು ಯೋಜನೆ ಪರ ರೈತರು ಹೇಳಿದರು.

ರೈತ ಮುಖಂಡರಾದ ಹೊಸೂರು ರಾಜಣ್ಣ, ಎಚ್.ಎಸ್.ಸಿದ್ದರಾಜು, ಬೈರಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ರೈತಮುಖಂಡರಾದ ಶಿವರಾಮ್, ರಾಮಾಂಜಿನಿ, ಕೃಷ್ಣಮೂರ್ತಿ, ಯಾಲಕಯ್ಯ, ವೆಂಕಟಾಚಲಯ್ಯ, ನಾಗರಾಜು, ಸಂಜೀವರೆಡ್ಡಿ, ತಾಯಪ್ಪನದೊಡ್ಡಿಸ್ವಾಮಿ, ವಿನಯ್ ಕುಮಾರ್, ನಾಗೇಶ್, ಅಂಚೀಪುರ ಶೇಖರ್ ಮತ್ತಿತರರು ಹಾಜರಿದ್ದರು.