ಸಾರಾಂಶ
ಗ್ರಾಪಂ ನೌಕರ ಮಾರಶೆಟ್ಟಿ ಗ್ರಾಮದ ನಿವಾಸಿ ಮಹೇಶ್ ಬಳಿ ಇ- ಸ್ವತ್ತುಗೆ 20 ಸಾವಿರ ರು. ಲಂಚ ಪಡೆದಿದ್ದು, ಹೆಚ್ಚುವರಿ ಪಡೆದಿದ್ದ 9700 ರು.ಗಳನ್ನು ವಾಪಸ್ ರೈತಸಂಘದ ಕಾರ್ಯಕರ್ತರು ಕೊಡಿಸಿದರು.
ಗುಂಡ್ಲುಪೇಟೆ:
ತಾಲೂಕಿನ ಶಿವಪುರ ಗ್ರಾಪಂನ ವಿವಿಧ ಕಾಮಗಾರಿಗಳ ಭ್ರಷ್ಟಾಚಾರ ಖಂಡಿಸಿ ಹಾಗೂ ಹಕ್ಕೋತ್ತಾಯಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಾಮೂಹಿಕ ರೈತ ಸಂಘದ ಕಾರ್ಯಕರ್ತರು ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಗ್ರಾಪಂ ಕಚೇರಿ ಮುಂದೆಯೇ ಗಾಂಧೀಜಿ, ಅಂಬೇಡ್ಕರ್, ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿ, ಹಕ್ಕೋತ್ತಾಯ ಮಂಡಿಸಿದರು.ಗ್ರಾಪಂ ನೌಕರ ಮಾರಶೆಟ್ಟಿ ಗ್ರಾಮದ ನಿವಾಸಿ ಮಹೇಶ್ ಬಳಿ ಇ- ಸ್ವತ್ತುಗೆ 20 ಸಾವಿರ ರು. ಲಂಚ ಪಡೆದಿದ್ದು, ಹೆಚ್ಚುವರಿ ಪಡೆದಿದ್ದ 9700 ರು.ಗಳನ್ನು ವಾಪಸ್ ರೈತಸಂಘದ ಕಾರ್ಯಕರ್ತರು ಕೊಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಎಸ್.ಆರ್.ಮಹದೇವಸ್ವಾಮಿ, ಮಂಜುನಾಥ್, ಸಿದ್ದಪ್ಪ ಸೇರಿದಂತೆ ಹಲವು ಮಂದಿ ಇದ್ದರು.
೧೬ಜಿಪಿಟಿ೫ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಪಂ ಕಚೇರಿ ಮುಂದೆ ರೈತಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.