ಸಾರಾಂಶ
19ನೇ ಕ್ರಸ್ಟ್ಗೇಟ್ ಅಳವಡಿಕೆಯ ಕುರಿತು ಜಿಲ್ಲಾ ಮಂತ್ರಿ ಸುಳ್ಳು ಹೇಳುತ್ತಾರೆ. ಟಿಬಿ ಬೋರ್ಡ್ಗೆ ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ಕ್ರಸ್ಟ್ಗೇಟ್ ಅಳವಡಿಸಬೇಕು. ಗೇಟ್ ಅಳವಡಿಕೆಯಾಗದಿದ್ದರೆ ಅಚ್ಚುಕಟ್ಟು ಪ್ರದೇಶಕ್ಕೆ ಒಂದೇ ಬೆಳೆಗೆ ನೀರು ಸಿಗುತ್ತದೆ.
ಕೊಪ್ಪಳ:
ತುಂಗಭದ್ರಾ ಡ್ಯಾಂಗೆ ಕ್ರಸ್ಟ್ಗೇಟ್ ಅಳವಡಿಸಿ, ಎರಡು ಬೆಳೆಗಳಿಗೆ ನೀರು ಕೊಡಬೇಕು. ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಉಸ್ತುವಾರಿ ಸಚಿವರು ಇಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ. ಅದನ್ನೆಲ್ಲ ಬಿಟ್ಟು ಬೆಂಗಳೂರಿನಲ್ಲಿ ತುಂಗಭದ್ರಾ ನೀರು ನಿರ್ವಹಣಾ ಸಮಿತಿ ಸಭೆ ಕರೆದಿರುವುದು ಎಷ್ಟು ಸರಿ? ಎಂದರು.
19ನೇ ಕ್ರಸ್ಟ್ಗೇಟ್ ಅಳವಡಿಕೆಯ ಕುರಿತು ಜಿಲ್ಲಾ ಮಂತ್ರಿ ಸುಳ್ಳು ಹೇಳುತ್ತಾರೆ. ಟಿಬಿ ಬೋರ್ಡ್ಗೆ ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ಕ್ರಸ್ಟ್ಗೇಟ್ ಅಳವಡಿಸಬೇಕು. ಗೇಟ್ ಅಳವಡಿಕೆಯಾಗದಿದ್ದರೆ ಅಚ್ಚುಕಟ್ಟು ಪ್ರದೇಶಕ್ಕೆ ಒಂದೇ ಬೆಳೆಗೆ ನೀರು ಸಿಗುತ್ತದೆ. ಎರಡು ಬೆಳೆಗೆ ನೀರು ನೀಡದಿದ್ದರೆ ಈ ಭಾಗದ ಜನರು ಗುಳೆ ಹೋಗುತ್ತಾರೆ. ಮಕ್ಕಳ ಶೈಕ್ಷಣಿಕ ಭವಿಷ್ಯ ಹದಗೆಡುತ್ತದೆ ಎಂದರು.ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ಕ್ರಸ್ಟ್ಗೇಟ್ ದುರಸ್ತಿ ಕಾರ್ಯ ವಿಳಂಬ ಮಾಡುತ್ತಿದೆ. ವಿಳಂಬಕ್ಕೆ ಸರ್ಕಾರದ ಬೇಜವಾಬ್ದಾರಿಯೂ ಕಾರಣವಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ, ಗಣೇಶ ಹೊರತಟ್ನಾಳ, ರೈತ ಮೋರ್ಚಾದ ಅಶೋಕ ಗುಡದಳ್ಳಿ, ಯುವ ಮೋರ್ಚಾ ಉಪಾಧ್ಯಕ್ಷ ಪುಟ್ಟರಾಜ ಚಕ್ಕಿ ಇದ್ದರು.