ಅಂಗಡಿ ಮಾಲೀಕ ಅಮೃತ್ ಅವರ ಮಾಹಿತಿಯಂತೆ, ಮಾಸ್ಕ್ ಧರಿಸಿಕೊಂಡು ಅಪರಿಚಿತ ವ್ಯಕ್ತಿ ಗ್ರಾಹಕನಂತೆ ನಟಿಸಿ ಅಂಗಡಿಗೆ ಬಂದಿದ್ದು, ಮೊದಲು ತಾಳಿ ಗುಂಡು ಹಾಗೂ ಚಿನ್ನದ ಸರ ಬೇಕೆಂದು ಹೇಳಿ ವೀಕ್ಷಿಸಿದ್ದಾನೆ. ನಂತರ ಉಂಗುರ ತೋರಿಸುವಂತೆ ಕೇಳಿದ್ದಾನೆ. ಅಂಗಡಿ ಮಾಲೀಕ ಉಂಗುರ ತರುವ ವೇಳೆ, ಆ ವ್ಯಕ್ತಿ ಗಮನ ಬೇರೆಡೆ ಸೆಳೆದು ಇಟ್ಟಿದ್ದ ಚಿನ್ನದ ಸರವನ್ನು ಜೇಬಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ. ಕಳವಾಗಿರುವ ಸರವು ಸುಮಾರು 12 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ ಸುಮಾರು ₹1.90 ಲಕ್ಷ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಗಾಣಿಗರ ಬೀದಿಯಲ್ಲಿರುವ ಕನ್ನಿಕಾ ಜ್ಯೂಯಲರ್‌ ಅಂಗಡಿಯಲ್ಲಿ ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಚಾಣಾಕ್ಷತನದಿಂದ ಚಿನ್ನದ ಸರ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಅಂಗಡಿ ಮಾಲೀಕ ಅಮೃತ್ ಅವರ ಮಾಹಿತಿಯಂತೆ, ಮಾಸ್ಕ್ ಧರಿಸಿಕೊಂಡು ಅಪರಿಚಿತ ವ್ಯಕ್ತಿ ಗ್ರಾಹಕನಂತೆ ನಟಿಸಿ ಅಂಗಡಿಗೆ ಬಂದಿದ್ದು, ಮೊದಲು ತಾಳಿ ಗುಂಡು ಹಾಗೂ ಚಿನ್ನದ ಸರ ಬೇಕೆಂದು ಹೇಳಿ ವೀಕ್ಷಿಸಿದ್ದಾನೆ. ನಂತರ ಉಂಗುರ ತೋರಿಸುವಂತೆ ಕೇಳಿದ್ದಾನೆ. ಅಂಗಡಿ ಮಾಲೀಕ ಉಂಗುರ ತರುವ ವೇಳೆ, ಆ ವ್ಯಕ್ತಿ ಗಮನ ಬೇರೆಡೆ ಸೆಳೆದು ಇಟ್ಟಿದ್ದ ಚಿನ್ನದ ಸರವನ್ನು ಜೇಬಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ. ಕಳವಾಗಿರುವ ಸರವು ಸುಮಾರು 12 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ ಸುಮಾರು ₹1.90 ಲಕ್ಷ ಎಂದು ತಿಳಿದುಬಂದಿದೆ. .ಈ ಸಂಬಂಧ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಮಹಜರು ಮಾಡಲು ಪೊಲೀಸರು ಬಂದಿದ್ದು ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ.