ದಸರಾ ಮುಂಚೆಯೇ ಸರ್ಕಾರ ಪತನ ಖಚಿತ: ಶ್ರೀರಾಮುಲು ಭವಿಷ್ಯ

| Published : Jun 30 2025, 12:34 AM IST

ದಸರಾ ಮುಂಚೆಯೇ ಸರ್ಕಾರ ಪತನ ಖಚಿತ: ಶ್ರೀರಾಮುಲು ಭವಿಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ವೇಳೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಫಿಕ್ಸ್ ಎಂದು ಮಾಜಿ ಸಚಿವ ಶ್ರೀರಾಮುಲು ಹೊಸ ಬಾಂಬ್‌ ಸಿಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದಸರಾ ವೇಳೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಫಿಕ್ಸ್ ಎಂದು ಮಾಜಿ ಸಚಿವ ಶ್ರೀರಾಮುಲು ಹೊಸ ಬಾಂಬ್‌ ಸಿಡಿಸಿದ್ದಾರೆ.ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಮುನ್ನವೇ ಸಿದ್ದರಾಮಯ್ಯ ಸಿಎಂ ಪಟ್ಟ ಕಳೆದುಕೊಳ್ಳಲಿದ್ದಾರೆ. ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ನೂರಕ್ಕೆ ನೂರು ಸರ್ಕಾರ ಪತನವಾಗಲಿದೆ. 2018ರಲ್ಲೂ ಕಾಂಗ್ರೆಸ್ ನವರೇ ಸರ್ಕಾರ ಕೆಡವಿದ್ರು, ಈಗಲೂ ಸಹ ಕೈ ನಾಯಕರಿಂದಲೇ ಸರಕಾರ ಬೀಳುತ್ತದೆ. ಅಧಿಕಾರ ಹಸ್ತಾಂತರ ವಿಷಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂದು ಮಾಜಿ ಸಚಿವ ಶ್ರೀ ರಾಮುಲು ಭವಿಷ್ಯ ನುಡಿದಿದ್ದಾರೆ.

ಸಚಿವ ರಾಜಣ್ಣ ಸಹ ರಾಜ್ಯದಲ್ಲಿ ಕ್ರಾಂತಿಯಾಗಲಿದೆ ಎಂದಿದ್ದಾರೆ. ಸಚಿವ ರಾಜಣ್ಣ ಮಾತು ಕೇಳಿದ್ರೆ ಸರ್ಕಾರ ಪತನವಾಗಲಿದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಬಾವುಟ ಹಾರಿಸುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಸಿಎಂ ಬಹಳಷ್ಟು ಪ್ರಕರಣಗಳಲ್ಲಿ ಆರೋಪಿ:

ಸಿಎಂ ಅವರೇ ಬಹಳಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ವಸತಿ ಇಲಾಖೆ, ಅಬಕಾರಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ. ವಾಲ್ಮೀಕಿ ಹಗರಣದಲ್ಲಿ ಸಂಭಂಧಪಟ್ಟ ಮಂತ್ರಿಗಳು ಜೈಲಿಗೆ ಹೋಗಿ ಬಂದರು. ವಸತಿ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಅವರ ಪಕ್ಷದ ನಾಯಕರೇ ಧ್ವನಿ ಎತ್ತಿದ್ದಾರೆ. ಬಿ.ಆರ್. ಪಾಟೀಲ್ ಹಾಗೂ ಬೀಳೂರು ಗೋಪಾಲಕೃಷ್ಣ, ರಾಜು ಕಾಗೆ ಅವರು ಹೇಳಿಕೆ ಕೊಟ್ಟಿದ್ದಾರೆ. ಇವೆಲ್ಲವನ್ನು ನೋಡ್ತಿದ್ರೆ, ಇವತ್ತು ಅಧಿಕಾರ ಹಸ್ತಾಂತರದ ಟ್ರೆಂಡ್ ನಡೆಯುತ್ತಿದೆ. ನವೆಂಬರ್ ಆದ ಮೇಲೆ ಬದಲಾವಣೆ, ದಸರಾ ಆದ ಮೇಲೆ ಸಿಎಂ ಬದಲಾವಣೆ ಅಂತಾರೆ. ದಸರಾ ಉತ್ಸವಕ್ಕೂ ಮುಂಚೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಖುರ್ಚಿಗೆ ತೊಂದರೆ ಬಂದರೆ, ಅಧಿಕಾರ ಹಸ್ತಾಂತರ ಮಾಡೋಕೆ ಒಪ್ಪಲ್ಲ. ಮೀನು ನೀರಿನಿಂದ ಹೊರಗೆ ಬಂದರೆ ಹೇಗಾಗುತ್ತೆ. ಹಾಗೆಯೇ ಸಿದ್ದರಾಮಯ್ಯ ಸ್ಥಿತಿ ಆಗಲಿದೆ. ಅವರು ಅಧಿಕಾರ ಬಿಟ್ಟುಕೊಡಲ್ಲ. ಈ ಸರ್ಕಾರ ಬಿದ್ದು ಹೋದರೆ ಮಧ್ಯಂತರ ಚುನಾವಣೆ ಬರುತ್ತದೆ. ಅಧಿಕಾರ ಹಸ್ತಾಂತರದ ಗುಸು ಗುಸು ಶುರುವಾಗ್ತಿದ್ದಂತೆ, ಸರ್ಕಾರ ಆದಷ್ಟು ಬೇಗ ಪತನವಾಗುತ್ತೆ, ಮಧ್ಯಂತರ ಚುನಾವಣೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯರಾದ ರಾಜಣ್ಣ ಅವ್ರು ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗಬಹುದು ಎಂದು ಹೇಳಿದ್ದಾರೆ. ಅವರು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವಂತವರು, ಅಂತವರೇ, ಈ ಕ್ರಾಂತಿ ಬಗ್ಗೆ ಮಾತನಾಡುದ್ದಾರೆ ಅಂದ್ರೆ ಏನಾಗುತ್ತೋ ನೋಡಬೇಕು, ಯಾವುದೇ ಚುನಾವಣೆ ಬಂದರೂ ಕಾಂಗ್ರೆಸ್ ಧೂಳಿಪಟ ಆಗಲಿದೆ. ಬಿಜೆಪಿಯನ್ನ ಗೆಲ್ಲಿಸಿ ಅಧಿಕಾರಕ್ಕೆ ಏರುತ್ತೇವೆ ಎಂದ ರಾಮುಲು ತಿಳಿಸಿದರು.

ಒಗ್ಗಟ್ಟಾಗಿದ್ದೇವೆ, ಅಧಿಕಾರ ಹಿಡಿಯುತ್ತೇವೆ:

ಪೇ ಸಿಎಂ ಎಂದು ನಮಗೆ ಅಪಪ್ರಚಾರ ಮಾಡಿದರು. ಅದನ್ನ ಫೇಸ್ ಮಾಡಲು ನಮಗೆ ಆಗಲಿಲ್ಲ ಅನ್ನೋದನ್ನು ನಾನು ಒಪ್ಪುತ್ತೇನೆ. ಇಂದು ಕಾಂಟ್ರ್ಯಾಕ್ಟರ್ ಗಳ ಪರಿಸ್ಥಿತಿ ಹೇಗಾಗಿದೆ ಅಂದರೆ ದುಡ್ಡಿಗಾಗಿ ಅಲೆಯೋ ಸ್ಥಿತಿ ಬಂದಿದೆ. ಪರಮೇಶ್ವರ ಸಿದ್ದರಾಮಣ್ಣ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳಿದ್ದಾರೆ. ಪ್ರಚಾರಕ್ಕೆ ಮಾತ್ರ ಹಣದ ಸಮಸ್ಯೆ ಇಲ್ಲ, ಇವರು ಅವಧಿ ಪೂರ್ಣಗೊಳಿಸಲ್ಲ. ಮಧ್ಯಂತರ ಚುನಾವಣೆ ಬರುತ್ತದೆ. ನಾವೆಲ್ಲ ಒಗ್ಗಟ್ಟಾಗಿ ಪೂರ್ಣ ಪ್ರಮಾಣದಲ್ಲಿ ಗೆದ್ದು, ಅಧಿಕಾರ ಹಿಡಿಯುತ್ತೇವೆ,ಯಾವುದೇ ಭ್ರಷ್ಟಾಚಾರ ಆಗಲಿ ಒಂದು ಸಮೀತಿ ಮಾಡ್ತಾರೆ, ಇದೊಂದು ಫ್ಯಾಶನ್ ಆಗಿಬಿಟ್ಟಿದೆ ಅವ್ರಿಗೆ, ನಿವೃತ್ತ ಜಡ್ಜ್ ಅವರನ್ನು ನೇಮಿಸಿ ತನಿಖೆ ಅಂತಾರೆ, ಕಾಲ್ತುಳಿತ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿದರು. ಅದನ್ನ ಡೈವರ್ಟ್‌ ಮಾಡಲು, ಜನಗಣತಿ ವಿಚಾರ ಚರ್ಚೆಗೆ ಬರುವಂತೆ ಮಾಡಿದಿರಿ. ನಾವು ಜಾತಿ ಗಣತಿ ವಿರೋಧಿಗಳಲ್ಲ ಅಂತಾರೆ. ₹165 ಕೋಟಿ ಖರ್ಚು ಮಾಡಿ ಜಾತಿಗಣತಿ ಮಾಡಿದರು. ಅದನ್ನ ಅಂಕಿ ಸಂಖ್ಯೆ ಸರಿ ಇಲ್ಲ ಎಂದು ಅವರೇ ಹೇಳಿದರು. ಈಗ ಮತ್ತೆ ಜಾತಿ ಗಣತಿಗೆ ಮುಂದಾಗಿದ್ದಾರೆ. ಜನರನ್ನು ಕನ್ಪ್ಯೂಸ್ ಮಾಡಲು ಜಾತಿ ಗಣತಿಗಾಗಿ ದೆಹಲಿಗೆ ಕರೆಯಿಸಿ, ಆ ವರದಿ ಒಪ್ಪಿಕೊಳ್ಳಲ್ಲ ಅಂದರು ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು, ಪಕ್ಷದ ತೀರ್ಮಾನವೇ ಅಂತಿಮ. ಇನ್ನೂ ಒಂದುವರೆ ವರ್ಷ ವಿಜಯೇಂದ್ರ ಅವರಿಗೆ ಸಮಯ ಇದೆ. ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಧ್ಯಕ್ಷರಿಗೆ 3 ವರ್ಷ ಕಲಾವಧಿ ಇರುತ್ತದೆ. ಪಕ್ಷದ ನಿಯಮ ಎಲ್ಲರೂ ಪಾಲಿಸಬೇಕು ಎಂದರು.

ವಿಪಕ್ಷ ನಾಯಕ ಆರ್. ಅಶೋಕ ಅವರ ಬದಲಾವಣೆ ಕುರಿತು ಉತ್ತರಿಸಿದ ಅವರು, ಅಶೋಕ ಅವರು ಸಕ್ರೀಯವಾಗಿ ಸರ್ಕಾರದ ವಿರುದ್ಧ ಚಾಟಿ ಬೀಸುವ ಕೆಲಸ ಮಾಡ್ತಿದ್ದಾರೆ. ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ನಾವು ವಿರೋಧ ಪಕ್ಷದ ನಾಯಕರಿಗೆ ರಾಜ್ಯದ ಜನರು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ. ಈ ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷದ ನಾಯಕರ ಬಗ್ಗೆ ಗೌರವ ಇಲ್ಲ. ಈ ಸರ್ಕಾರದ ನಾಯಕರು ಐಎಎಸ್, ಐಪಿಎಸ್ ಆಫೀಸರ್ ಗಳನ್ನು ಬೂಟ ಗಾಲಲ್ಲಿ ಒದೆಯುತ್ತಿದ್ದಾರೆ. ಬಿಹಾರ ಚುನಾವಣೆಗಾಗಿ ಇಲ್ಲಿ ಲೂಟಿ ಮಾಡ್ತಿದ್ದಾರೆ. ಖಜಾನೆ ಖಾಲಿ ಮಾಡಿ, ಏನೂ ಡೆವೆಲಪ್‌ಮೆಂಟ್‌ ಇಲ್ಲ, ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಸಂವಿಧಾನದಲ್ಲಿರುವ ಜಾತ್ಯತೀತ ಮತ್ತು ಸಮಾಜವಾದಿ ಶಬ್ಧಗಳನ್ನು ತೆಗೆದು ಹಾಕಲಿ ಎಂಬ ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಕುರಿತು ಮಾತನಾಡಿ, ಆರ್‌ಎಸ್‌ಎಸ್‌ ನ ಬಗ್ಗೆ ಆರೋಪಿಸಲು ಈ ಸರ್ಕಾರಕ್ಕೆ ನೈತಿಕ ಹಕ್ಕಿಲ್ಲ. ಸಂವಿಧಾನ ಹಾಗೂ ಸಮಾಜವಾದಿ ಅನ್ನೋ ಪದ ಸೇರಿಸಿದ್ದೇ ಅವರು, ಈ ಬಗ್ಗೆ ಚರ್ಚೆಗೆ ಬರಲಿ ಎಂದು ಶ್ರೀರಾಮುಲು ಸವಾಲು ಹಾಕಿದರು.

ಕುಚಿಕು ಗೆಳೆಯನ ಬಗ್ಗೆ ಸಂಬಂಧ ಸಹಜ ಸ್ಥಿತಿಗೆ ಬಂದಿದೆಯಾ ಎಂಬ ಪ್ರಶ್ನೆಗೆ, ನಾನು ಯಾವುದನ್ನು ವೈಯಕ್ತಿವಾಗಿ ತಗೊಳ್ಳಲ್ಲ. ಎಲ್ಲವೂ ಸರಿ ಇದೆ. ಇಬ್ಬರೂ ಒಟ್ಟೊಟ್ಟಿಗೆ ಇರೋದನ್ನು ನೀವು ನೋಡ್ತೀರಿ, ಈ ಬಾರಿ ಎಸ್ಸಿ, ಎಸ್ಟಿ ಹಾಗೂ ಓಬಿಸಿ ಜನರನ್ನು ಬಿಜೆಪಿಗೆ ತಂದು ಪಕ್ಷ ಗೆಲ್ಲಿಸೋದೆ ನಮ್ಮ ಗುರಿ ಎಂದು ಶ್ರೀರಾಮುಲು ತಿಳಿಸಿದರು.