ಹರಪನಹಳ್ಳ‍ಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಾಗಿ ಲಾಟಿ ದಾದಾಪೀರ ಆಯ್ಕೆ

| Published : Oct 25 2025, 01:00 AM IST

ಹರಪನಹಳ್ಳ‍ಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಾಗಿ ಲಾಟಿ ದಾದಾಪೀರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಜಿ.ಎಸ್. ಸುರೇಂದ್ರ ಘೋಷಿಸಿದರು.

ಹರಪನಹಳ್ಳ‍ಿ: ಇಲ್ಲಿಯ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ (ಪಿಕಾರ್ಡ್‌) ಅಧ್ಯಕ್ಷರಾಗಿ ಪಟ್ಟಣದ ಕಾಂಗ್ರೆಸ್ ಯುವ ಮುಖಂಡ ಲಾಟಿ ದಾದಾಪೀರ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಜಿ.ಎಸ್. ಸುರೇಂದ್ರ ಘೋಷಿಸಿದರು. ಈವರೆಗೂ ಅಧ್ಯಕ್ಷರಾಗಿದ್ದ ಭರ್ಮಪ್ಪ ರಾಜಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು. ಬ್ಯಾಂಕಿನ ವ್ಯವಸ್ಥಾಪಕ ಶಾಹೀದ್‌ ಇದ್ದರು.

ಪಿಕಾರ್ಡ್ ಬ್ಯಾಂಕಿನ ಇತಿಹಾಸದಲ್ಲಿಯೇ ಅಲ್ಪಸಂಖ್ಯಾತರೊಬ್ಬರಿಗೆ ಅಧ್ಯಕ್ಷರಾಗಲು ಕಾಂಗ್ರೆಸ್‌ ಪಕ್ಷ ಅದರಲ್ಲೂ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಪಿಕಾರ್ಡ್‌ ಬ್ಯಾಂಕಿನ ನೂತನ ಅಧ್ಯಕ್ಷ ಲಾಟಿ ದಾದಾಪೀರ ಅವರಿಗೆ ಅಭಿನಂದಿಸಿದರು. ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಬೇರಗೌಡ, ಅರಸೀಕೆರೆ ಬ್ಲಾಕ್‌ ಅಧ್ಯಕ್ಷ ಎಸ್.ಮಂಜುನಾಥ, ಕಾಂಗ್ರೆಸ್‌ ಪಕ್ಷದ ಮುಖಂಡ ಬಿ.ಕೆ. ಪ್ರಕಾಶ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಬ್ಯಾಂಕಿನ ಹಿರಿಯ ನಿರ್ದೇಶಕ ಪೋಮ್ಯನಾಯ್ಕ, ಕನಕನ ಬಸ್ಸಾಪುರ ಮಂಜುನಾಥ, ಪಿ.ಬಿ. ಗೌಡ, ರೆಡ್ಡಿ ಶಾಂತಕುಮಾರ, ಚಿದಾನಂದಸ್ವಾಮಿ, ಜಂಬಣ್ಣ, ಮೈದೂರು ಓ.ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ, ಇಸ್ನಾಯಿಲ್‌ ಎಲಿಗಾರ, ಬಸವರಾಜ ಸಂಗಪ್ಪನವರ್, ಅಂಜುಮನ್‌ ಸಮಿತಿ ಕಾರ್ಯದ್ಯಕ್ಷ ಕೂಲ್‌ ಇರ್ಪಾನ್‌, ಹುಲ್ಲಿಕಟ್ಟಿ ಭಾಷು, ಬ್ಲಾಕ್‌ ಕಾಂಗ್ರೆಸ್‌ ಉಪಾದ್ಯಕ್ಷ ಶಶಿಕುಮಾರನಾಯ್ಕ, ದಂಡಿನ ಹರೀಶ ಇತರರು ಉಪಸ್ಥಿತರಿದ್ದರು.