ಪಡಿತರ ಅಕ್ರಮ‌ ಸಾಗಣೆ: ಮೂರು ಕ್ವಿಂಟಾಲ್ ಅಕ್ಕಿ, ಆರೋಪಿ ವಶ

| Published : Jan 06 2025, 01:00 AM IST

ಪಡಿತರ ಅಕ್ರಮ‌ ಸಾಗಣೆ: ಮೂರು ಕ್ವಿಂಟಾಲ್ ಅಕ್ಕಿ, ಆರೋಪಿ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪಡಿತರ ವಶಕ್ಕೆ ಪಡೆದ ಘಟನೆ ತಾಲೂಕಿನ ಆಲ್ದೂರು ಗೇಟ್ ಬಳಿ ಭಾನುವಾರ ನಡೆದಿದೆ.

ಚಾಮರಾಜನಗರ: ಸರ್ಕಾರದಿಂದ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಪಡಿತರ ವಶಕ್ಕೆ ಪಡೆದ ಘಟನೆ ತಾಲೂಕಿನ ಆಲ್ದೂರು ಗೇಟ್ ಬಳಿ ಭಾನುವಾರ ನಡೆದಿದೆ. ಟೀ.ನರಸೀಪುರ ತಾಲೂಕಿನ ಮುದಸೀರ್ ಬಂಧಿತ ಆರೋಪಿ. ಈತ ಅಕ್ರಮವಾಗಿ ಪಡಿತರ ಸಾಗಾಟ ಮಾಡುತ್ತಿದ್ಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದು ಬಂಧಿತನಿಂದ 1 ಕ್ವಿಂಟಾಲ್ ಅಕ್ಕಿ, 2 ಕ್ವಿಂಟಾಲ್ ರಾಗಿ, ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಚಾಮರಾಜನಗರ ಆಹಾರ ನಿರೀಕ್ಷಕ ದಿನಕರ್, ಕುದೇರು ಠಾಣೆ ಪಿಎಸ್ಐ ಕುಮುದಾ ಹಾಗೂ ಪೊಲೀಸ್ ಸಿಬ್ಬಂದಿ ನಾಗನಾಯಕ ಇದ್ದರು.