ಹಾವೇರಿ ನಗರದ ಜೆಪಿ ಸರ್ಕಲ್ ಹತ್ತಿರದ ಗೂಗಿಕಟ್ಟೆಯಲ್ಲಿರುವ ಪೌರಾಡಳಿತ ಇಲಾಖೆಯಿಂದ 6.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ರಂಗಮಂದಿರಕ್ಕೆ ಭಾನುವಾರ ವಿಧಾನಸಭೆ ಉಪಸಭಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು.

ಹಾವೇರಿ: ನಗರದ ಜೆಪಿ ಸರ್ಕಲ್ ಹತ್ತಿರದ ಗೂಗಿಕಟ್ಟೆಯಲ್ಲಿರುವ ಪೌರಾಡಳಿತ ಇಲಾಖೆಯಿಂದ 6.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ರಂಗಮಂದಿರಕ್ಕೆ ಭಾನುವಾರ ವಿಧಾನಸಭೆ ಉಪಸಭಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು.ಹಲವು ದಿನಗಳಿಂದ ರಂಗಮಂದಿರದ ಕಟ್ಟಡದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಿರುವುದರಿಂದ ಈ ಕಟ್ಟಡ ಪಾಳು ಬಿದ್ದಂತಾಗಿದೆ. ಕೂಡಲೇ ಈ ಕಟ್ಟಡದ ನಿರ್ವಹಣೆಯನ್ನು ಖಾಸಗಿ ಅವರಿಗೆ ನೀಡಿ ರಂಗಮಂದಿರದ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಟ್ಟಡಕ್ಕೆ ಬೇಕಾದ ಅಗತ್ಯ ಮೂಲಭೂತ ಒದಗಿಸಲು ನನ್ನ ಅನುದಾನದಲ್ಲಿ ಹೆಚ್ಚಿನ ಅನುದಾನ ನೀಡುತ್ತೇನೆ. ಕೂಡಲೇ ಕಟ್ಟಡದ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮರುಪರಿಶೀಲಿಸಿ ಸಿದ್ಧಗೊಳಿಸುವಂತೆ ತಿಳಿಸಿದರು. ಯಾರೋ ಕಿಡಿಗೇಡಿಗಳಿಂದ ರಂಗಮಂದಿರದ ಕಟ್ಟಡದ ಗ್ಲಾಸ್ ಒಡೆದಿರುವುದನ್ನು ಗಮನಿಸಿದ ಉಪಸಭಾಧ್ಯಕ್ಷರು ಕೂಡಲೇ ಇದನ್ನು ಸ್ವಚ್ಛಗೊಳಿಸಿ ಮುಂದೆ ಈ ರೀತಿ ಕಟ್ಟಡ ಹಾಳಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಗಳಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ್ ಕಲಾಲ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.