ಜಾನಪದ ಸಂಸ್ಕೃತಿ ಉಳಿಸಿ ಬೆಳೆಸ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ: ಭಂಡಾರಿ ಶ್ರೀನಿವಾಸ್

| Published : Apr 12 2025, 12:48 AM IST

ಜಾನಪದ ಸಂಸ್ಕೃತಿ ಉಳಿಸಿ ಬೆಳೆಸ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ: ಭಂಡಾರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಆಧುನಿಕ ಸಮಾಜದಲ್ಲಿ ಗ್ರಾಮೀಣರಿಂದ ಉಳಿದಿರುವ ಜಾನಪದ ಸಂಸ್ಕೃತಿ ಮರೆಯಾಗುತ್ತಿದ್ದು ಅದನ್ನು ಉಳಿಸಿ ಬೆಳೆಸ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಆಧುನಿಕ ಸಮಾಜದಲ್ಲಿ ಗ್ರಾಮೀಣರಿಂದ ಉಳಿದಿರುವ ಜಾನಪದ ಸಂಸ್ಕೃತಿ ಮರೆಯಾಗುತ್ತಿದ್ದು ಅದನ್ನು ಉಳಿಸಿ ಬೆಳೆಸ ಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಶುಕ್ರವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಸೊಗಡು -2025 ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ‌ ಹಿಂದಿನವರ ಜೀವನ ಮೌಲ್ಯ, ಆಚಾರ, ವಿಚಾರ, ಮರುಕಳಿಸುವಂತೆ ಮಾಡುವ ಸಲುವಾಗಿ ಜಾನಪದ ಉತ್ಸವವನ್ನು ಮತ್ತೆ ಮೆಲಕು ಹಾಕಲು‌ ರಾಜ್ಯ ಸರ್ಕಾರ ಕಾಲೇಜು ವಿದ್ಯಾರ್ಥಿಗಳ ಮೂಲಕ ಉತ್ತೇಜನ ನೀಡಿರುವುದು ಜಾನಪದ ಕಲೆಗಳಿಗೆ ಮರುಜೀವ ನೀಡಿದಂತಾಗಿದೆ ಎಂದರು.ಜಾನಪದ ಸಂಸ್ಕೃತಿಯಿಂದ ಮಾನವೀಯ ಮೌಲ್ಯಗಳು ಹೆಚ್ಚಾಗುತ್ತದೆ. ಜಾನಪದ ಸಂಸ್ಕೃತಿ ಯಾವುದೇ ಜಾತಿ ಭೇದ, ಮೇಲು-ಕೀಳು ತಾರತಮ್ಯ ಇಲ್ಲದ ಮಾನವೀಯ ಸಂಸ್ಕೃತಿಯಾಗಿದೆ. ಈ ನಿಟ್ಟಿನಲ್ಲಿ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಥಮ ಭಾರಿಗೆ ಆಯೋಜಿಸಿರುವ ಜನಪದ ಉತ್ಸವದ ಮೆರುಗನ್ನು ಪ್ರಾಚಾರ್ಯರು ಹಾಗೂ ಭೋಧಕರ ಮಾರ್ಗದರ್ಶನದೊಂದಿಗೆ ಕಾಲೇಜಿನ‌ ವಿದ್ಯಾರ್ಥಿಗಳು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೆ.ಎ.ರಾಜಣ್ಣ ಮಾತನಾಡಿ, ಜನಪದ ಕಲೆಗಳಲ್ಲಿ ದೇಸಿಯ ಸೊಗಡು ಕಾಣ ಬಹುದು. ಈ ನೆಲದ ಸಂಸ್ಕೃತಿ ಹಾಗು ಸಂಸ್ಕಾರ ಅದರಲ್ಲಿ ಅಡಕವಾಗಿದೆ. ದೇಸಿ ಸಂಸ್ಕೃತಿ ಆಚರಣೆ ಪದ್ಧತಿಯಲ್ಲಿ ಹಲವು ವೈವಿದ್ಯತೆ ಕಾಣಬಹುದು. ಇದಕ್ಕೆ ಕಾಲೇಜಿನ ವಿದ್ಯಾರ್ಥಿಗಳೇ ಪೂರಕ ತಯಾರಿಯೊಂದಿಗೆ ಜನಪದ ಉತ್ಸವಕ್ಕೆ ಹೆಚ್ಚು ಒತ್ತು ನೀಡಿ ಯಶಸ್ವಿಗೊಳಿಸಲಾಗಿದೆ ಎಂದರು.ಕಾರ್ಯಕ್ರಮವನ್ನು ಚೌಡಿಕೆ ಪದ ಕಲಾವಿದ ಎಂ.ಸಿ. ಭೋಗಪ್ಪ, ವೀರಗಾಸೆ ಕಲಾವಿದ ಬಿ.ಡಿ.ರಾಜಪ್ಪ, ಕದಳಿ ಮಹಿಳಾ ಭಜನಾ ಸಂಘದ ಉಮಾ ಬಸವರಾಜು ಉದ್ಘಾಟಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಕುಮಾರ್ ಎಸ್, ಕ್ರೀಡಾ ವೇದಿಕೆ ಸಂಚಾಲಕ ಜಿ.ತಿಮ್ಮರಾಜು, ಉಪನ್ಯಾಸಕರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಜಾನಪದ ನೃತ್ಯಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

-- ಬಾಕ್ಸ್‌ --- ಜಾನಪದ ಉತ್ಸವದ ಅಂಗವಾಗಿ ಸರ್ಕಾರಿ ಪದವಿ ಕಾಲೇಜಿನ ಮುಂಭಾಗದಿಂದ ಪಟ್ಟಣದ ಅಂಬೇಡ್ಕರ್ ವೃತ್ತ, ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಕೆಎಲ್ ವಿ ವೃತ್ತಕ್ಕೆ ಸಾಗಿ ಬಳಿಕ ಮರವಂಜಿ ವೃತ್ತದ ಮೂಲಕ ಕಾಲೇಜಿನ ತನಕ ಅಲಂಕೃತಗೊಂಡ ಎತ್ತಿನ ಗಾಡಿಗಳ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಪೂರ್ಣ ಕುಂಭದೊಂದಿಗೆ ವೀರಗಾಸೆ, ಲಂಬಾಣಿ ನೃತ್ಯ, ಚೋಮನ ಕುಣಿತ, ಕೋಲಾಟ, ಕೊಡವರ ಶೈಲಿ ನೃತ್ಯ ಸೇರಿದಂತೆ ವಿವಿಧ ಪ್ರಕಾರದ ನೃತ್ಯವನ್ನು ಪಟ್ಟಣದ ಬಿ.ಎಚ್.‌ ರಸ್ತೆ ಮಾರ್ಗದಿಂದ ಕಾಲೇಜು ಕ್ಯಾಂಪಸ್ ವರೆಗೆ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಳಿಕ ಕಾಲೇಜಿನ ಆವರಣದಲ್ಲಿ ಹಸಿರಿನಿಂದ ಅಲಂಕರಿಸಿದ್ದು ಎಲ್ಲರ ಕಣ್ಮನ ಸೆಳೆಯಿತು. ವಿವಿಧ ತಳಿಗಳ ರಾಸುಗಳ ಪ್ರದರ್ಶನ, ಯುಗಾದಿ, ಗೌರಿ-ಗಣೇಶ, ದೀಪಾವಳಿ,‌ಸಂಕ್ರಾಂತಿ, ನಾಡಹಬ್ಬ ದಸರಾ ಹಬ್ಬಗಳ‌ ವೈವಿಧ್ಯತೆಯ ಆಚರಣೆ ನಡೆಯಿತು. ಸುಗ್ಗಿ ಕಾಲದಂತೆ ರಾಗಿ,‌ ನವಣೆ, ಸಾವೆ, ಉದ್ದು, ಜೋಳ ಸೇರಿದಂತೆ ಸಿರಿಧಾನ್ಯಗಳ ಬೆಳೆಯನ್ನು ವಿವಿಧ ಬಗೆಯಲ್ಲಿ ಅಲಂಕೃತಗೊಳಿಸಿದ್ದು ವಿಶೇಷ ಗಮನ ಸೆಳೆಯಲಾಯಿತು. ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ಭೋಧಕ ವರ್ಗದವರು ದೇಸಿ ಶೈಲಿಯ ಉಡುಗೆಯೊಂದಿಗೆ ವಿದ್ಯಾರ್ಥಿಗಳ ಮತ್ತು ಜನರ ಗಮನ ಸೆಳೆದರು.11ಕೆಕೆಡಿಯು1,1ಎ..ಕಡೂರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಜಾನಪದ ಸೊಗಡಿನ ಉತ್ಸವದ ಮೆರವಣಿಗೆಗೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು. ಪ್ರಾಚಾರ್ಯ ಕೆ.ಎ.ರಾಜಣ್ಣ ಹಾಗೂ ಬೋಧಕವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.11ಕೆಕೆಡಿಯು1ಬಿ.ಜನಪದ ಉತ್ಸವದಲ್ಲಿ ಸಿರಿ ಧಾನ್ಯಗಳ ಬೆಳೆಯೊಂದಿಗೆ ವಿದ್ಯಾರ್ಥಿಗಳು ವಿವಿಧ ಬಗೆಯಲ್ಲಿ ಅಲಂಕೃತಗೊಳಿಸಿದ್ದು‌ ಎಲ್ಲರ ಗಮನಸೆಳೆಯಿತು.