ಸಾರಾಂಶ
ಕಾಲೇಜಿನ ಸಿದ್ಧಾಂತ್ ಆರ್. ನಾಯ್ಕ್, ಸುಜಿತ್ ಡಿ.ಕೆ., ಕೆ.ಧ್ರುವ ಭಂಡಾರ್ಕರ್, ಅರ್ಜುನ್ ಇ. ನಾಯಕ್, ಕಾರ್ತಿಕ್ ಎ. ಎಸ್., ಶಮಿತ್ ಎನ್. ಉನ್ನತ ರ್ಯಾಂಕ್ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ದೇಶದ ಪ್ರತಿಷ್ಠಿತ ಐಐಟಿ, ಐಐಎಸ್ಟಿ, ಐಐಎಸ್ಸಿನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.ಕಾಲೇಜಿನ ಸಿದ್ಧಾಂತ್ ಆರ್. ನಾಯ್ಕ್, ಸುಜಿತ್ ಡಿ.ಕೆ., ಕೆ.ಧ್ರುವ ಭಂಡಾರ್ಕರ್, ಅರ್ಜುನ್ ಇ. ನಾಯಕ್, ಕಾರ್ತಿಕ್ ಎ. ಎಸ್., ಶಮಿತ್ ಎನ್. ಉನ್ನತ ರ್ಯಾಂಕ್ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಸಿದ್ದಾಂತ್ ಆರ್ ನಾಯ್ಕ್ 1565, ಸುಜಿತ್ ಡಿ.ಕೆ. 3648, ಅರ್ಜುನ್ ಇ. ನಾಯಕ್ 3298, ಕೆ.ಧ್ರುವ ಭಂಡಾರ್ಕರ್ 4260ನೇ ಕೆಟಗರಿ ರ್ಯಾಂಕ್ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.ಈ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯು ಆರಂಭದ ವರ್ಷಗಳಲ್ಲೇ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆ.ಇ.ಇ. ಅಡ್ವಾನ್ಸ್ಡ್ಪರೀಕ್ಷೆಯ ಸಂಯೋಜಕರಾದ ತಿರುಮಲ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.