ಸಾರಾಂಶ
ಕನ್ನಡ ಕಡ್ಡಾಯ ನಾಮಫಲಕ ಅಭಿಯಾನದ ನೇತೃತ್ವ ವಹಿಸಿ ಬೃಹತ್ ಪ್ರತಿಭಟನಾ ಜಾಗೃತಿ ಹೋರಾಟ ಹಮ್ಮಿಕೊಂಡಿದ್ದ ಅವರನ್ನು ಮತ್ತು ಹಲವು ಕಾರ್ಯಕರ್ತರನ್ನು ಬಂಧಿಸಿ ಅಗೌರವದಿಂದ ನಡೆಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಬಲವಾಗಿ ಖಂಡಿಸಿದ್ದಾರೆ.
ಕೊಪ್ಪಳ: ನಾಡು, ನುಡಿಗಾಗಿ ಹೋರಾಟ ಮಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಬೆಂಬಲಿಗರನ್ನು ಬಂಧಿಸಿದ್ದು ಖಂಡನಾರ್ಹ. ಕೂಡಲೇ ಬೇಷರತ್ ಬಿಡುಗಡೆ ಮಾಡುವಂತೆ ಕರವೇ ಜಿಲ್ಲಾ ಘಟಕ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.ಕನ್ನಡ ಕಡ್ಡಾಯ ನಾಮಫಲಕ ಅಭಿಯಾನದ ನೇತೃತ್ವ ವಹಿಸಿ ಬೃಹತ್ ಪ್ರತಿಭಟನಾ ಜಾಗೃತಿ ಹೋರಾಟ ಹಮ್ಮಿಕೊಂಡಿದ್ದ ಅವರನ್ನು ಮತ್ತು ಹಲವು ಕಾರ್ಯಕರ್ತರನ್ನು ಬಂಧಿಸಿ ಅಗೌರವದಿಂದ ನಡೆಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಬಲವಾಗಿ ಖಂಡಿಸಿದ್ದಾರೆ.ರಾಜ್ಯ ಸರ್ಕಾರದ, ಬಿಬಿಎಂಪಿ, ಸ್ಥಳೀಯ ಪ್ರಾಧಿಕಾರಗಳ ಸ್ಪಷ್ಟ ಆದೇಶ ಉಲ್ಲಂಘನೆ ಮಾಡಿ ಆಂಗ್ಲ ಮತ್ತು ಇತರೆ ಭಾಷೆಗಳ ನಾಮಫಲಕ ಹಾಕಿರುವವರ ಉದ್ದಿಮೆಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್ ಸಂಕೀರ್ಣಗಳು ಹಾಗೂ ಮಾಲ್ಗಳಿಗೆ 2023ರ ನವೆಂಬರ್ನಿಂದ ನಾಮಫಲಕಗಳನ್ನು ಬದಲಾವಣೆಗೊಳಿಸಲು ಗಡವು ಮತ್ತು ಕಾಲಾವಕಾಶ ನೀಡಿದ್ದರೂ ಉದ್ಧಟತನ ತೋರಿ ನಿಷ್ಕಾಳಜಿ ವಹಿಸಿರುವುದನ್ನು ಖಂಡಿಸಿ ಬೆಂಗಳೂರಿನ ಸಾದಹಳ್ಳಿ ಟೋಲ್ಗೇಟ್ನಿಂದ ಕಬ್ಬನ್ಪಾರ್ಕ್ವರೆಗೆ ಬೀದಿಗಿಳಿದು ಪ್ರತಿಭಟನಾ ಮೆರೆವಣಿಗೆ ಹೊರಡುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರು ಮತ್ತು ಹಲವು ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದರು.ಸರ್ಕಾರ ಮಾಡುವ ಕೆಲಸವನ್ನು ನಾರಾಯಣಗೌಡ ನೇತೃತ್ವದ ಕರವೇ ಮಾಡಿದೆ. ಇದನ್ನು ಪೊಲೀಸರ ಮುಖಾಂತರ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಕನ್ನಡ ಮತ್ತು ಕನ್ನಡಿಗರ ಪರ ಸರ್ಕಾರವೆಂದು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಕರವೇ ರಾಜ್ಯಾದ್ಯಂತ ಬೀದಿಗಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೊಲೀಸ್ಪಾಟೀಲ, ಯುವ ಘಟಕ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಗೌರವಾಧ್ಯಕ್ಷ ಸಂಜಯ ಖಟವಟೆ, ಕುಷ್ಟಗಿ ತಾಲೂಕಾಧ್ಯಕ್ಷ ಪ್ರಕಾಶ ಮನ್ನೆರಾಳ, ಕಾರಟಗಿ ತಾಲೂಕಾಧ್ಯಕ್ಷ ಪ್ರಶಾಂತ ನಾಯಕ, ಕುಕನೂರು ತಾಲೂಕಾಧ್ಯಕ್ಷ ರಮೇಶ ಹಾಲವರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಯಲಬುರ್ಗಾ ಯುವ ಘಟಕ ತಾಲೂಕಾಧ್ಯಕ್ಷ ಶಿವಕುಮಾರ ಗೌಡರ, ಕಾರ್ಯಕರ್ತರಾದ ಆನಂದ ಎಲಿಗಾರ, ನೂರಬಾಷಾ ಕವಲೂರು, ಶರಣಯ್ಯ ಹಿರೇಮಠ, ಮಂಜುನಾಥ ಇನಾಮದಾರ, ಶ್ರೀಕಾಂತ ಗುರುವಿನ್, ಗುರುಸಿದ್ದಪ್ಪ ಬೇಳೂರು, ಬಸವರಾಜ ಚಿಕೇನಕೊಪ್ಪ, ಶಶಿ ಬಿಡನಾಳ, ಈರಣ್ಣ ಗುಡಿಗೇರ, ಚಂದ್ರು ಭಜಂತ್ರಿ, ಸಂದೀಪ ಭಜಂತ್ರಿ, ಪ್ರಜ್ವಲ ಬೆಸ್ತರ, ಹನುಮೇಶ ನಾಯಕ, ಸುಹೈಲ್ ಎಸ್.ಪಿ. ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.