ಸಾರಾಂಶ
ಗ್ರಾಮದ ಹೆಬ್ಬಾಳದಿಂದ ವೀರಮಾಸ್ತಿ ಕೆಂಪಮ್ಮನವರ ಕರಗ ಮತ್ತು ಕಳಸವನ್ನು ಹೊತ್ತು ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಕುಂಭಾಭಿಷೇಕವನ್ನು ನೆರವೇರಿಸಲಾಯಿತು. ಅನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿದವು.
ಭಾರತೀನಗರ: ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಶ್ರೀವೀರಮಾಸ್ತಿ ಕೆಂಪಮ್ಮನ ದೇವಸ್ಥಾನ ಲೋಕಾರ್ಪಣೆಗೊಂಡಿತು.
ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಗದ್ದುಗೆ ಪ್ರತಿಷ್ಠಾಪನೆ, ಪ್ರಧಾನ ಕಳಸಪೂಜೆ, ಹೋಮ ಸೇರಿ ವಿವಿಧ ಪೂಜಾ- ಕೈಂಕರ್ಯಗಳು ನೆರವೇರಿದವು.ಕಾರ್ಕಹಳ್ಳಿಯ ಗುರುಮಠದ ಶ್ರೀ ಗುರುಸೋಮರಾಧ್ಯ ಹಾಗೂ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಕಾರ್ತಿಕ್ ಆರಾಧ್ಯ, ಶಿವಾನಂದ ಆರಾಧ್ಯ ಅವರ ದಿವ್ಯ ಸಾನ್ನಿಧ್ಯದಲ್ಲಿ ಗೋಪುರ ಕಳಸ ಪ್ರತಿಷ್ಠಾಪನೆ ಹಾಗೂ ಗದ್ದುಗೆ ಪ್ರತಿಷ್ಠಾಪನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು. ಶ್ರೀವೀರಮಾಸ್ತಿ ಕೆಂಪಮ್ಮ ದೇವರ ಕುಲಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಮನೆ ದೇವರ ಕಾರ್ಯದಲ್ಲಿ ಶಾಸಕ ಮಧು ಜಿ. ಮಾದೇಗೌಡರ ಕುಟುಂಬದವರು ಪಾಲ್ಗೊಂಡು ಪೂಜೆ ಸಲ್ಲಿಸಿದರು.ಕಾರ್ಕಹಳ್ಳಿ ಶ್ರೀ ಬಸವೇಶ್ವರ ಬಸವಪ್ಪ, ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಬಸವಪ್ಪಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಹೆಬ್ಬಾಳದಿಂದ ವೀರಮಾಸ್ತಿ ಕೆಂಪಮ್ಮನವರ ಕರಗ ಮತ್ತು ಕಳಸವನ್ನು ಹೊತ್ತು ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಕುಂಭಾಭಿಷೇಕವನ್ನು ನೆರವೇರಿಸಲಾಯಿತು. ಅನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿದವು.ಪೂಜಾ ಪ್ರಾರಂಭ ಸಮಯದಲ್ಲಿ ವರುಣನ ಸಿಂಚನವಾಗಿದ್ದು ವಿಶೇಷವಾಗಿತ್ತು. ನಂತರ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂರ್ಪಣೆ ನಡೆಯಿತು.
ಕಾಂಗ್ರೆಸ್ ಮುಖಂಡ ಆಶಯ್ ಮಧು ಮಾತನಾಡಿದರು. ಈ ವೇಳೆ ಗ್ರಾಮದ ಯಜಮಾನರು, ಮುಖಂಡರು ಹಾಗೂ ದೇವಿ ಕುಲಬಾಂಧವರು ಇದ್ದರು.