ಕೊಡಗು ಕೊಡವ ತಕ್ಕ್ ಒಕ್ಕೂಟದ ಲಾಂಭನ ಬಿಡುಗಡೆ

| Published : Nov 03 2025, 02:45 AM IST

ಸಾರಾಂಶ

ಕೊಡಗು ತಕ್ಕ್‌ ಒಕ್ಕೂಟದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಕೊಡವ ತಕ್ಕ್ ಒಕ್ಕೂಟದ ಲಾಂಭನವನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಗೃಹ ಕಚೇರಿ ಕೃಷ್ಣದಲ್ಲಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣರವರ ನೇತೃತ್ವದಲ್ಲಿ ಕೊಡವ ತಕ್ಕ್ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೊಡವ ತಕ್ಕ್ ಒಕ್ಕೂಟದ 21 ಮೂಲನಿವಾಸಿಗಳ ಅಭಿವೃದ್ಧಿಗೆ 8 ಎಕರೆ ಪೈಸಾರಿ ಜಾಗವನ್ನು ಮಂಜೂರು ಮಾಡಲು ಮನವಿ ಸಲ್ಲಿಸಿ, ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮಂತ್ರಿಸ್ಥಾನ ನೀಡಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.

ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಸಚಿವರಾದ ಭೋಸರಾಜು, ಭೈರತಿ ಸುರೇಶ್, ಹಿಂದುಳಿದ ವರ್ಗಗಳ ಸಚಿವರು ಶಿವರಾಜ್ ತಂಗಡಗಿ, ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಅಧ್ಯಕ್ಷ ಜಿ. ಅಯ್ಯಪ್ಪ, ಉಪಾಧ್ಯಕ್ಷ ಕುಡಿಯರ ಮುತ್ತಪ್ಪ, ಬಾನಂಡ ಪ್ರಥ್ವಿ, ದಿನು ಭೋಜಪ್ಪ, ರಾಜಾ ಜೋಯಪ್ಪ, ಮುದ್ದಯ್ಯ, ಪಂದಿಕಂಡ ದಿನೇಶ್, ಉಮೇಶ್ ಕೆಂಚಮಯ್ಯ, ನಾಯಂದಿರ ಶಿವಾಜಿ, ಲವಪ್ಪ, ರೈನಾ ಕಾರ್ಯಪ್ಪ, ಉತ್ತಪ್ಪ, ನಾಣಯ್ಯ, ಅನು ಚಿಣ್ಣಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.