ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮಂಗಳವಾರ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ಹೊನ್ನಾಳಿಯಲ್ಲಿ ಸರ್ಕಾರಿ ಬಸ್ಗಳ ಸಂಚಾರ ಎಂದಿನಂತೆ ಮುಂದುವರಿಯಿತು.
ಹೊನ್ನಾಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮಂಗಳವಾರ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ಹೊನ್ನಾಳಿಯಲ್ಲಿ ಸರ್ಕಾರಿ ಬಸ್ಗಳ ಸಂಚಾರ ಎಂದಿನಂತೆ ಮುಂದುವರಿಯಿತು.
ಮುಷ್ಕರದ ಕಾರಣ ಸ್ಥಳೀಯ ಪೊಲೀಸರು ಬೆಳಗಿನ ಜಾನದಿಂದಲೇ ಸೂಕ್ತ ರಕ್ಷಣೆಗಾಗಿ ಕೆ.ಎಸ್.ಆರ್.ಟಿ.ಸಿ. ಡಿಪೋ ಹಾಗೂ ಬಸ್ ನಿಲ್ದಾಣದಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿನಿತ್ಯ ಹೊನ್ನಾಳಿ ಮಾರ್ಗವಾಗಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ಸುಮಾರು 250ಕ್ಕೂ ಹೆಚ್ಚು ಬಸ್ಗಳು ನಿತ್ಯ 450 ಟ್ರಿಪ್ ಓಡಾಡುತ್ತವೆ. 450 ಟ್ರಿಪ್ನಲ್ಲಿ ಸಾವಿರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ.ಹೊನ್ನಾಳಿ ಡಿಪೋದಿಂದಲೇ ಸುಮಾರು 35 ಬಸ್ಗಳ ಸಂಚಾರವಿದೆ. ಈ ಎಲ್ಲ ಬಸ್ಗಳ ಸಂಚಾರ ಅಬಾಧಿತವಾಗಿ ಮುಂದುವರಿಯಿತು. ಆದರೆ ಲಾಂಗ್ ರೂಟ್ ಬಸ್ಗಳ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆ ಎನಿಸಿದರೂ ದಾವಣಗೆರೆ, ಹರಿಹರ, ಶಿವಮೊಗ್ಗ, ಧರ್ಮಸ್ಥಳ, ಹುಬ್ಬಳ್ಳಿ, ಚಿಕ್ಕಮಗಳೂರು, ಹಾಸನ ಮುಂತಾದ ಕಡಗೆ ಸಂಚರಿಸುವ ಬಸ್ಗಳು ಎಂದಿನಂತೆ ಹೊನ್ನಾಳಿ ಮೂಲಕ ಸಂಚರಿಸಿದವು.
ಮುಷ್ಕರ ಎನ್ನುವ ಕಾರಣಕ್ಕೆ ಬಸ್ ಸಿಗುವ ಬಗ್ಗೆ ಅನುಮಾನವಿದ್ದ ಕಾರಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಲ್ಪಮಟ್ಟದ ಇಳಿಕೆ ಕಂಡುಬಂತು, ಆದರೂ ಕೂಡ ಬಸ್ಗಳು ಎಂದಿನಂತೆ ಸಂಚರಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮುಷ್ಕರ ಯಶಸ್ಸು ಕಾಣದೇ ಹೋಯಿತು. ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಬಸ್ ಸೇವೆಯಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ.- - -
-5ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಎಂದಿನಂತೆ ವಿವಿಧ ಕಡೆಗಳಿಗೆ ಹೋಗುವ ಬಸ್ಗಳು ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಿದವು. ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.