ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹಾಗೂ ಲಾಳನಕೆರೆ ಗ್ರಾಮದಲ್ಲಿ ೬ ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ ಭೂಮಿ ಪೂಜೆ ನೆರವೇರಿಸಿದರು.

ಕಾವೇರಿ ನೀರಾವರಿ ನಿಗಮದಿಂದ ಕೊತ್ತತ್ತಿ ಗ್ರಾಮದಲ್ಲಿ ೫ ಕೋಟಿ ರು. ವೆಚ್ಚದಲ್ಲಿ ಕಾವೇರಿ ಶಾಖಾ ನಾಲೆಯ ೯, ೧೦ ಮತ್ತು ೧೨ನೇ ವಿತರಣಾ ನಾಲೆಗಳ ಪಿಕಪ್‌ಗಳ ಅಭಿವೃದ್ಧಿ, ಲಾಳನಕೆರೆ ಗ್ರಾಮದಲ್ಲಿ ೧ ಕೋಟಿ ರು. ವೆಚ್ಚದಲ್ಲಿ ನಾಲಾ ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ ಇಟ್ಟುಕೊಂಡು ಬದ್ಧತೆಯಿಂದ ಕೆಲಸ ಕಾರ್ಯನಿರ್ವಹಿಸುತ್ತಿದ್ದು, ಜನಪರ ಕೆಲಸಗಳನ್ನು ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಮಾಡುವ ಮೂಲಕ ನಮ್ಮ ಕುಟುಂಬದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಇರಬೇಕೆಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ಕೊತ್ತತ್ತಿ ಗ್ರಾಮದ ಮುಖಂಡರಾದ ಸಾಮಿಲ್ ಕೆ.ಬೋರೇಗೌಡ, ಭಾಸ್ಕರ್, ಯತೀಶ್, ಬಾರ್ ಅನಂತ್, ಯೋಗೇಶ್‌ಗೌಡ, ಕೆ.ಎಸ್.ರವಿ, ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡ ಗವಿಗೌಡ, ಮುತ್ತಪ್ಪ, ರಮೇಶ್, ಲಾಳನಕೆರೆ ಗ್ರಾಮದ ಮುಖಂಡರಾದ ನಂಜುಂಡಪ್ಪ, ಮಹದೇವಪ್ಪ, ಮಧು, ಪಟೇಲ್ ಪುಟ್ಟಪ್ಪ, ಸಣ್ಣಯ್ಯ, ಶಿವಮಲ್ಲಪ್ಪ, ಎಇಇ ವಿಶ್ವನಾಥ್, ಇಂಜಿನಿಯರ್ ಕೆಂಪರಾಜು, ಗುತ್ತಿಗೆದಾರರಾದ ಶಶಿಕುಮಾರ್, ನಂಜುಂಡಪ್ಪ ಹಾಜರಿದ್ದರು.