ಕುಡಿವ ನೀರೊದಗಿಸಲು ಆಗ್ರಹಿಸಿ ಪುರಸಭೆಗೆ ಮುತ್ತಿಗೆ

| Published : Jul 01 2024, 01:53 AM IST

ಸಾರಾಂಶ

ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪೂರ ನಗರದ ವಾರ್ಡ್‌-೧೫ರ ಪಟೇಲ ಕಾಲೋನಿ ನಿವಾಸಿಗಳು ಚರಂಡಿ, ಕುಡಿವ ನೀರು, ವಿದ್ಯುತ್‌ ದೀಪ, ಸಿಮೆಂಟ್‌ ರಸ್ತೆ ಇನ್ನಿತರ ಮೂಲ ಸೌಕರ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಪುರಸಭೆ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪೂರ ನಗರದ ವಾರ್ಡ್‌-೧೫ರ ಪಟೇಲ ಕಾಲೋನಿ ನಿವಾಸಿಗಳು ಚರಂಡಿ, ಕುಡಿವ ನೀರು, ವಿದ್ಯುತ್‌ ದೀಪ, ಸಿಮೆಂಟ್‌ ರಸ್ತೆ ಇನ್ನಿತರ ಮೂಲ ಸೌಕರ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ಪುರಸಭೆ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪಟೇಲ ಕಾಲೋನಿಯಲ್ಲಿ ೨೦೦ ಕುಟುಂಬಗಳು ವಾಸಿಸುತ್ತಿವೆ ಇಲ್ಲಿನ ನಿವಾಸಿಗಳಿಗೆ ಅನೇಕ ವರ್ಷಗಳಿಂದ ಶುದ್ಧ ನೀರು ಪೂರೈಕೆ ಆಗುತ್ತಿಲ್ಲ, ಕಾಲೋನಿಯ ಪಕ್ಕದಲ್ಲಿಯೇ ಹರಿಯುವ ಚರಂಡಿಯೂ ಪ್ರತಿವರ್ಷ ಮಳೆಗಾಲದಲ್ಲಿ ಭಾರಿ ಪ್ರಮಾಣದಲಿ ನೀರು ಹರಿಯುತ್ತಿರುವುದರಿಂದ ಮಳೆ ನೀರು ಅನೇಕ ಮನೆಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದೆ ಮಳೆಗಾಲದಲ್ಲಿಯಾವ ಸಮಯದಲ್ಲಿ ಮನೆಯೊಳಗೆ ಮಳೆ ನೀರು ನುಗ್ಗುತ್ತವೆ ಎಂಬ ಭಯದ ವಾತಾವರಣದಲ್ಲಿಯೇ ವಾಸಿಸುವಂತಾಗಿದೆ ಎಂದು ಪುರಸಭೆ ಸದಸ್ಯೆ ಸುಲ್ತಾನಬೇಗಮ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮ ಸಮಾಜ ಹಿರಿಯ ಮುಖಂಡ ಮತೀನ ಸೌದಾಗರ ಮಾತನಾಡಿ, ಪಟೇಲ್ ಕಾಲೋನಿಯಲ್ಲಿ ಜನರು ಪುರಸಭೆ ಸೌಲಭ್ಯಗಳೇ ಕೊಟ್ಟಿಲ್ಲ ಇಲ್ಲಿ ಚರೆಂಡಿಯಲ್ಲಿ ಗಿಡಗಂಟಿಗಳು ಹುಲ್ಲು ಅತಿಯಾಗಿ ಬೆಳೆದಿರುವುದರಿಂದ ಹುಳಹುಪ್ಪಡಿಗಳ ವಾಸವಾಗಿವೆ ರಾತ್ರಿ ವೇಳೆಯಲ್ಲಿ ಹಾವುಚೇಳು ರಸ್ತೆಯಲ್ಲಿಯೇ ತಿರುಗಾಡುತ್ತವೆ ಜನರು ಓಡಾಡುವುದು ತುಂಬಾ ಕಷ್ಟದಾಯಕವಾಗಿದೆ.ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ಇಂಜನಿಯರುಗಳಿಗೆ ಅನೇಕ ಸಲ ಬೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು ಗಮನಹರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಪರ ಸಂಘಟನೆ ಮುಖಂಡ ಸದ್ದಾಮ ಸೌದಾಗರ ಮಾತನಾಡಿ, ಪಟೇಲ ಕಾಲೋನಿಯಲ್ಲಿ ಚರಂಡಿಯ ಹೊಲಸು ತುಂಬಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ ವಿದ್ಯುತ ದೀಪ, ಕುಡಿಯುವ ನೀರು ಪೂರೈಕೆ ಸರಿಯಾಗಿಲ್ಲ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿವೆ ಇದರ ಬಗ್ಗೆ ಪುರಸಭೆ ನಿರ್ಲಕ್ಷತನ ಮಾಡದೇ ಜನರಿಗೆ ಹಾನಿಯಾಗದಂತೆ ಗಮನಹರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಮಹಮ್ಮದ ಜಿಯಾರೆಹೆಮಾನ್, ಹಸೇನ ಹಾಶ್ಮಿ,ಮಕಬೂಲಖಾನ, ಅಕ್ರಮಖಾನ,ಮಂಜೂರಹೆಮದ, ರೆಹೆಮತ ರಿಜ್ವಾನಬೇಗಮ, ಸಮೀನಾಬೀ, ಜೀಜಬೀ ಇನ್ನಿತರರು ಭಾಗಹಿಸಿದ್ದರು.

ಮೂಲಸೌಕರ್ಯಗಳ ಕುರಿತು ನಡೆದ ಪ್ರತಿಭಟನೆಯಲ್ಲಿ ಮುಖ್ಯಾಧಿಕಾರಿ ಮತ್ತು ಪ್ರತಿಭಟನೆ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪಿಎಸ್‌ಐ ಹಣಮಂತ ಭಂಕಲಗಿ ಎಲ್ಲರದನ್ನು ಸಮಾಧಾನಪಡಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಲಾಅಯಿತು.

ಪಟೇಲ್ ಕಾಲೋನಿಯಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳ ಕುರಿತು ಸಾರ್ವಜನಿಕರ ಅಹವಾಲು ಕುರಿತು ಸ್ಥಳಕ್ಕೆ ಭೇಟಿ ನೀಡಿ ಅಗತ್ಯಕ್ರಮ ಕೈಕೊಳ್ಳುತ್ತೇನೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೆನೆ ಎಂದು ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ತಿಳಿಸಿದ್ದಾರೆ.