ಸಾರಾಂಶ
ರಾಜ್ಯದ ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಬೇಗನೆ ಈಡೇರಿಸಲಿ ಎಂದು ವಾಸುದೇವ ಮೇಟಿ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ಹರಿಹರದಲ್ಲಿ ಆಗ್ರಹಿಸಿದ್ದಾರೆ.
- ಹರಿಹರದಲ್ಲಿ ರೈತ ಸಂಘಟನೆಗಳ ಪ್ರತಿಭಟನೆ, ತಹಸೀಲ್ದಾರ್ಗೆ ಮನವಿ
- - - ಕನ್ನಡಪ್ರಭ ವಾರ್ತೆ, ಹರಿಹರರಾಜ್ಯದ ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಬೇಗನೆ ಈಡೇರಿಸಲಿ ಎಂದು ವಾಸುದೇವ ಮೇಟಿ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ಆಗ್ರಹಿಸಿದರು.
ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದ ಫಕೀರಸ್ವಾಮಿ ಮಠದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲ ಹೊತ್ತು ಘೋಷಣೆಗಳನ್ನು ಕೂಗಿ, ಅನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಗ್ರೇಡ್-2 ತಹಸೀಲ್ದಾರ್ ಸಿ. ಪುಷ್ಪವತಿ ಅವರಿಗೆ ಮನವಿ ಅರ್ಪಿಸಿ, ಅವರು ಮಾತನಾಡಿದರು.ಉದ್ಯೋಗ ಕಲ್ಪಿಸಿ:
ಹರಿಹರ-ಕೊಟ್ಟೂರು ರೈಲು ಮಾರ್ಗದ ಅಕ್ಕಪಕ್ಕದ ಜಮೀನುಗಳಿಗೆ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ರಸ್ತೆ ನಿರ್ಮಾಣ ಮಾಡಿ ಕೊಡಬೇಕು. ತಾಲೂಕಿನ ಸಾರಥಿ- ಕುರುಬರಹಳ್ಳಿ ಗ್ರಾಮದಲ್ಲಿ ರೈತರ ಸುಮಾರು 600 ಎಕರೆ ಜಮೀನನ್ನು ಕೆಐಎಡಿಬಿ ಯೋಜನೆಗೆ ಭೂಸ್ವಾಧೀನಗೊಳಿಸಲಾಗಿದೆ. ಇಲ್ಲಿಯವರೆಗೆ ಅಲ್ಲಿ ಯಾವುದೇ ಕಾರ್ಖಾನೆಗಳು ಅರಂಭವಾಗಿಲ್ಲ. ತಕ್ಷಣ ಇಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಿ, ಇಲ್ಲಿನ ಬಡ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದರು.ಹರಿಹರ ತಾಲೂಕು ಅಧ್ಯಕ್ಷ ಹೊಟ್ಟಿಗಾನಹಳ್ಳಿ ಸುನೀಲ್ ಮಾತನಾಡಿ, ತಾಲೂಕು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಕೃಷಿ ಉಪಕರಣಗಳಿಗೆ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅವಶ್ಯಕತೆ ಇರುವವರಿಗೆ ತುರ್ತಾಗಿ ಕೃಷಿ ಉಪಕರಣಗಳನ್ನು ವಿತರಿಸಬೇಕು. ರೈತರ ಜಮೀನುಗಳಲ್ಲಿ ಅಳವಡಿಸಿದ ಪಂಪ್ಸೆಟ್ಗಳಿಗೆ ಹಿಂದಿನಂತೆ ಉಚಿತ ವಿದ್ಯುತ್ ಪರಿಕರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಗೌರವಾಧ್ಯಕ್ಷ ಸಿ.ಹನುಮಂತಪ್ಪ, ತಾಲೂಕು ಗೌರವ ಕಾರ್ಯದರ್ಶಿ ಹಿರೇಬಿದರಿ ನಾಗರಾಜ್, ಹೋಬಳಿ ಮಟ್ಟದ ಕಾರ್ಯದರ್ಶಿ ಸುನೀಲ್ ಬುಳ್ಳಾಪುರ, ದಾವಣಗೆರೆ ತಾಲೂಕು ಅಧ್ಯಕ್ಷ ಕೆಂಚಮ್ಮನಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷ ಕಿತ್ತೂರ್ ಹನುಮಂತಪ್ಪ, ಜಗಳೂರು ತಾಲೂಕು ಕಾರ್ಯದರ್ಶಿ ಬಿ.ಕುಮಾರ್, ಜಿಲ್ಲಾ ಕಾರ್ಯದರ್ಶಿ ಕೋಲುಕುಂಟೆ ಹುಚ್ಚಂಗಪ್ಪ, ಹೋಬಳಿ ಘಟಕದ ಅಧ್ಯಕ್ಷ ಚಿಕ್ಕ ತೋಗಲೇರಿ ಮಲ್ಲಿಕಾರ್ಜುನ, ಪರಶುರಾಮಪ್ಪ, ಕಿರಣ್, ಕುಬೇಂದ್ರಪ್ಪ, ಹೊಟ್ಟಿಗಾನಹಳ್ಳಿ ರಾಮಜ್ಜ, ನಾಗರಾಜ, ಕುಬೇರಪ್ಪ, ಶೇಖರಪ್ಪ, ಚಂದ್ರಪ್ಪ ಹಾಗೂ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.- - -
ಟಾಪ್ ಕೋಟ್ ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡಿಯಬೇಕು. ದುಗ್ಗಾವತಿಯಿಂದ ಹೊಟ್ಟೆಗಾನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸಿ, ಹೊಟ್ಟಿಗಾನಹಳ್ಳಿ ಗ್ರಾಮಸ್ಥರಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಿ ಕೊಡಬೇಕು- ಹೊಟ್ಟಿಗಾನಹಳ್ಳಿ ಸುನೀಲ್ತಾ, ತಾಲೂಕು ಅಧ್ಯಕ್ಷ
- - - -9ಎಚ್ಆರ್ಆರ್8:ರೈತ ಸಂಘ ಪ್ರತಿಭಟನೆ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.