ವಿದ್ಯಾರ್ಥಿಗಳ ಚೈತನ್ಯಶಕ್ತಿ ಸದಾ ಜಾಗೃತವಾಗಿರಲಿ: ಪ್ರಕಾಶ ತಾರಿಕೊಪ್ಪ

| Published : Jul 06 2024, 01:00 AM IST

ವಿದ್ಯಾರ್ಥಿಗಳ ಚೈತನ್ಯಶಕ್ತಿ ಸದಾ ಜಾಗೃತವಾಗಿರಲಿ: ಪ್ರಕಾಶ ತಾರಿಕೊಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಚೈತನ್ಯ ಶಕ್ತಿಯು ಜಾಗರೂಕವಾಗಬೇಕಾದಲ್ಲಿ ಅವರಿಗೆ ಸರ್ವ ಅಂಗಗಳಿಗೆ ಚಟುವಟಿಕೆ ನೀಡಬೇಕು.

ಶಿರಸಿ: ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಶಿಬಿರವನ್ನು ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ ತಾರಿಕೊಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಚೈತನ್ಯ ಶಕ್ತಿಯು ಜಾಗರೂಕವಾಗಬೇಕಾದಲ್ಲಿ ಅವರಿಗೆ ಸರ್ವ ಅಂಗಗಳಿಗೆ ಚಟುವಟಿಕೆ ನೀಡಬೇಕು. ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಲಭ್ಯತೆ ಕೆಲವೇ ಇದ್ದು, ಅದಕ್ಕೆ ಪೂರಕವಾಗಿ ಸೇವಾದಳವು ಉತ್ತಮ ಕೆಲಸವನ್ನು ಮಾಡುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸೇವಾದಳ ತರಬೇತಿಯನ್ನು ನೀಡಬೇಕೆಂದು ಸಲಹೆ ನೀಡಿದರು.ಕೇಂದ್ರ ಸಮಿತಿಯ ಸದಸ್ಯ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಅವರನ್ನು ಗೌರವಿಸಲಾಯಿತು. ನಂತರ ಮಾತನಾಡಿ, ವಿಶ್ವದ ಮಾತೆ ಗೋವು. ನಾವು ಗೋವಿನಂತೆ ಸಹಕಾರ ಮನೋಭಾವನೆಯನ್ನು ಸದಾಕಾಲದಲ್ಲಿ ನಮ್ಮಲ್ಲಿರುವಂತೆ ನೋಡಿಕೊಳ್ಳಬೇಕು. ಗೋವುಗಳು ಮನುಷ್ಯನಂತಲ್ಲ, ಅವು ತಾಜ್ಯ ವಸ್ತುಗಳನ್ನು ತಿಂದು ಪೂಜ್ಯ ವಸ್ತುಗಳನ್ನು ನೀಡುತ್ತದೆ. ಆದರೆ ಮನುಷ್ಯ ಇದರ ವಿರುದ್ಧ. ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆಯಂತಹ ಉತ್ತಮ ಮೌಲ್ಯಗಳನ್ನು ಕಲಿಸಲು ಸೇವಾದಳ ಶಿಕ್ಷಕರು ಸಶಕ್ತರಾಗಿರುತ್ತಿರಿ ಎಂದರು.ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ. ಗಣೇಶ ಮಾತನಾಡಿ, ನಮ್ಮ ಶಾರೀರಿಕ ಚಲನೆಯಿಂದ ಬಂದ ಅನುಭವದ ಮೊತ್ತವನ್ನೆ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆದರ್ಶ ಶಿಕ್ಷಕರಾಗುತ್ತೇವೆ. ಕಾಲಕಾಲಕ್ಕೆ ನಮ್ಮನ್ನು ಪುನಶ್ಚೇತನಗೊಳಿಸಿಕೊಳ್ಳಬೇಕು ಎಂದರು.ಭಾರತ ಸೇವಾದಳ ತಾಲೂಕು ಅಧ್ಯಕ್ಷ ಅಶೋಕ ಭಜಂತ್ರಿ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ರಾಜ್ಯ ಸರ್ಕಾರಿ ನೌಕರರಾದ ಜಿಲ್ಲಾ ಅಧ್ಯಕ್ಷ ಕಿರಣ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಪಟಗಾರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ ಪಟಗಾರ ಸೇವಾದಳ ಶಿಬಿರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷೆ ವೀಣಾ ಭಟ್ಟ, ಕೋಶಾಧ್ಯಕ್ಷ ಕುಮಾರ ನಾಯ್ಕ, ಸದಸ್ಯರಾದ ಕೆ.ಎನ್. ನಾಯ್ಕ, ಸತೀಶ ಹೆಗಡೆ, ಹಿರಿಯ ಕ್ರೀಡಾಪಟು ಪಿ.ಎನ್. ಜೋಗಳೇಕರ ಉಪಸ್ಥಿತರಿದ್ದರು. ಶಿಕ್ಷಕರಿಗೆ ಸಾಬಿನಯ ಗೀತೆ, ದೈಹಿಕ ಶಿಕ್ಷಣ ತರಬೇತಿ, ಯೋಗ, ಪ್ರಾಣಾಯಾಮಗಳನ್ನು ರಾಮಚಂದ್ರ ಹೆಗಡೆ, ಉದಯಕುಮಾರ ಹೆಗಡೆ, ಸುಧಾಮ ಪೈ ತರಬೇತಿ ನೀಡಿದರು.

ಆರೋಗ್ಯ ಇಲಾಖೆಯ ಡಾ. ಮಧುಮಿತಾ ಎನ್.ಎಸ್. ಮಾನಸಿಕ ಆರೋಗ್ಯ ಮತ್ತು ನಿರ್ವಹಣೆ ಬಗ್ಗೆ ಮಾದಕ ವ್ಯಸನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸಮಿತಿ ಸದಸ್ಯೆ ಸಾವಿತ್ರಿ ಭಟ್ಟ, ಸರ್ವೇಶ್ವರ ಶೆಟ್ಟಿ, ವಿ.ಜಿ. ಹೆಗಡೆ, ಎನ್.ಎಂ. ಹೆಗಡೆ, ದಾಕ್ಷಾಯಣಿ ಕೊಡಿಯಾ ನೋಂದಣಿಗೆ ಸಹಕರಿಸಿದರು.ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉದಯ ಭಟ್ಟ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯಕುಮಾರ ಹೆಗಡೆ ನಿರೂಪಿಸಿದರು. ಕುಮಾರ ನಾಯ್ಕ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.