ಸಾರಾಂಶ
ಬೆಳವಾಡಿ ಮಂಜುನಾಥ್ಗೆ ಸಾಹಿತ್ಯ ಪ್ರಶಸ್ತಿಮೂಗ್ತಿಹಳ್ಳಿಯ ಸರ್ಕಾರಿ ಕಾಲೇಜಿನ ಉಪನ್ಯಾಸಕ
ಚಿಕ್ಕಮಗಳೂರು: ತಾಲೂಕಿನ ಮೂಗ್ತಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಅವರಿಗೆ ಜೀವಮಾನದ ಸಾಹಿತ್ಯ ಸಾಧನೆಗಾಗಿ ಭಾರತರತ್ನ ಸರ್. ಎಂ.ವಿಶ್ವೇಶ್ವರಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಡಿ.30 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡ ಕಲಾ ಉತ್ಸವದಲ್ಲಿ ಬೆಳವಾಡಿ ಮಂಜುನಾಥ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಾಹಿತಿ, ಬರಹಗಾರ ಡಾ.ಬೆಳವಾಡಿ ಮಂಜುನಾಥ್ ಅವರು 45 ಸ್ವತಂತ್ರ ಕೃತಿಗಳನ್ನು ರಚಿಸಿದ್ದು, 40 ಗ್ರಂಥಗಳನ್ನು ಸಂಪಾದಿಸಿದ್ದಾರೆ.ಪೋಟೋ ಪೈಲ್ ನೇಮ್ 12 ಕೆಸಿಕೆಎಂ 4