ಮಾ.09ಕ್ಕೆ ಜಿಲ್ಲಾಮಟ್ಟದ ಜಾನಪದ ಸಮ್ಮೇಳನ

| Published : Dec 20 2024, 12:45 AM IST

ಸಾರಾಂಶ

ಆನಂದಪುರದ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿ.ಮಂಜುನಾಥ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಜಿಲ್ಲಾಮಟ್ಟದ ಜಾನಪದ ಸಮ್ಮೇಳನ ಮಾರ್ಚ್ 09ರಂದು ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ತಿಳಿಸಿದರು.

ಸ್ಥಳೀಯ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಜಾನಪದ ಪರಿಷತ್, ತಾಲೂಕು ಮತ್ತು ಹೋಬಳಿ ಘಟಕದ ವತಿಯಿಂದ ಜಿಲ್ಲಾ ಜಾನಪದ ಸಮ್ಮೇಳನದ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆನಂದಪುರ ಸಮೀಪದ ಹೊಸೂರು ಗ್ರಾಪಂ ಚನ್ನಶೆಟ್ಟಿ ಕೊಪ್ಪದಲ್ಲಿ ಮಾ.9 ರಂದು ಒಂದು ದಿನ ವೈವಿಧ್ಯಮಯ ಜಾನಪದ ಕಾರ್ಯಕ್ರಮ ಚೆನ್ನಶೆಟ್ಟಿ ಕೊಪ್ಪದ ಚೆನ್ನಮ್ಮಾಜಿ ಯುವಕ ಸಂಘದ ಸಹಯೋಗದೊಂದಿಗೆ ಜಿಲ್ಲಾ ಜಾನಪದ ಸಮ್ಮೇಳನ ನಡೆಸಲಾಗುವುದು ಎಂದರು.

ಸಮ್ಮೇಳನ ಯಶಸ್ವಿಯಾಗಲು 8 ಉಪಸಮಿತಿಗಳನ್ನು ರಹಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಪ್ರಾರಂಭಗೊಂಡ ಸಮ್ಮೇಳ ಮಧ್ಯ ರಾತ್ರಿಯವರೆಗೆ ನಡೆಯಲಿದೆ. ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಜಿಲ್ಲಾ ಜಾನಪದ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಶೀಘ್ರದಲ್ಲೇ ಮಾಡಲಾಗುವುದು. ರಾಜ್ಯದಲ್ಲಿರುವ ಎಲ್ಲಾ ಜಾನಪದ ಕಲಾತಂಡಗಳ ಮಾಹಿತಿ ಕುರಿತು ಪುಸ್ತಕವನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಪೂರ್ವಭಾವಿ ಸಭೆಯಲ್ಲಿ ಜಾನಪದ ಕಲಾವಿದರಾದ ಬಿ.ಟಾಕಪ್ಪ, ಗುಡ್ಡಪ್ಪ ಜೋಗಿ, ನಾಗರಾಜ್ ಜೋಗಿ, ವಿ.ಟಿ ಸ್ವಾಮಿ, ಸತ್ಯನಾರಾಯಣ ಸಿರುವಂತೆ, ಬಿ.ಡಿ.ರವಿಕುಮಾರ್, ಡಾ.ವೆಂಕಟೇಶ್ ಜೋಯಿಸ್‌, ಸ್ವಾಮಿ ರಾವ್ ಗುಡವಿ, ವೆಂಕಟೇಶ್ ಚಂದಳ್ಳಿ, ಗಣಪತಿ ಯಡೇಹಳ್ಳಿ, ಜಯಪ್ಪ ಉಪಸ್ಥಿತರಿದ್ದರು.