ಮಹಾಶರಣ ಮಾದರ ಚನ್ನಯ್ಯ ಅದ್ಧೂರಿ ಜಯಂತ್ಯೋತ್ಸವ

| Published : Dec 16 2024, 12:45 AM IST

ಮಹಾಶರಣ ಮಾದರ ಚನ್ನಯ್ಯ ಅದ್ಧೂರಿ ಜಯಂತ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಮಹಿಳಾ ಸಮಾಜದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀಮಾದರ ಚನ್ನಯ್ಯನವರ ಜಯಂತ್ಯೋತ್ಸವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರುಮಹನೀಯರ ಬದುಕು, ಸಾಧನೆಯಿಂದ ಸ್ಫೂರ್ತಿಯನ್ನು ಪಡೆದು ಜಾಗೃತರಾಗಿ ಸಮಸಮಾಜದ ನಿರ್ಮಿಸಲು ಎಲ್ಲರೂ ಮುಂದಾಗಬೇಕು ಎಂದು ಎಂದು ವಿಧಾನ ಪರಿಷತ ಸದಸ್ಯ ಎ.ವಸಂತ ಕುಮಾರ ನಗರದ ಮಹಿಳಾ ಸಮಾಜದ ಆವರಣದಲ್ಲಿ ಮಾದರ ಚನ್ನಯ್ಯ ಜಯಂತ್ಯೋತ್ಸವ ಆಚರಣೆ ಸಮಿತಿಯಿಂದ ಹಮ್ಮಿಕೊಂಡಿದ್ದ ಮಹಾಶರಣ ಮಾದರ ಚನ್ನಯ್ಯ ಜಯಂತ್ಯೋತ್ಸವ ಸಮಾರಂಭವನ್ನು ಗಣ್ಯರಿಂದ ಜಂಟಿಯಾಗಿ ಉದ್ಘಾಟಿಸಿ ರವಿವಾರ ಮಾತನಾಡಿದರು.

12 ನೇ ಶತಮಾನದ ಸಮಾಜದ ದಾರ್ಶನಿಕರು ಹಾಗೂ ವಚನಕಾರರ ವಚನಗಳು ಸ್ಫೂರ್ತಿದಾಯವಾಗಿವೆ. ಇದರ ಮೂಲಕ ಮಾದಿಗ ಸಮಾಜ ಹಾಗೂ ಇತರ ಸಮಾಜದ ಮುಖಂಡರನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸಿ, ಸವಸಮಾಜ ನಿರ್ಮಾಣದ ಸಂದೇಶ ಸಾರುವ ಹಾಗೂ ಸಮಾಜ, ಯುವಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಶ್ರೀ ಮಾದರ ಚನ್ನಯ್ಯ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು.ಎಚ್ಚರಿಕೆಯ ಸಂದೇಶ: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದಲೂ ಹೋರಾಟ ನಡೆಸಿದ ಪರಿಣಾಮ ಆಯಾ ರಾಜ್ಯಗಳೇ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ತಿಂಗಳ ಕಾಲ ಗಡುವು ನೀಡಿದ್ದು, ವಿಳಂಬ ಧೋರಣೆ ಅನುಸರಿಸದೇ ಜಾರಿಗೊಳಿಸಬೇಕು ಎಂದು ಈ ಸಮಾವೇಶದ ಮುಖಾಂತರ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿದೆ ಎಂದು ಹೇಳಿದರು. ಯಾವುದೇ ಸಮಾಜದ ಅಭಿವೃದ್ಧಿ ಆಗಬೇಕಾದರೆ ಅವರಿಗೆ ಶಿಕ್ಷಣ ಮುಖ್ಯ, ಅದನ್ನು ಪಡೆಯುವುದರಿಂದ ಅನ್ಯಾಯ, ತಾರತಮ್ಯ, ಏನು ಮಾಡಬೇಕು ಎನ್ನುವ ವಿಷಯಗಳನ್ನು ಅರಿತುಕೊಳ್ಳಲು ಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.ಸಮಾಜದ ಅಭಿವೃದ್ಧಿಗೆ ಶಿಕ್ಷಣ ಸಾನಿಧ್ಯ ಕೋಡಿಹಳ್ಳಿಯ ಶ್ರೀಆದಿ ಜಾಂಬವ ಮಹಾಸಂಸ್ಥಾನದ ಶ್ರೀಷಡಕ್ಷರಿ ಮುನಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ಪ್ರಾಸ್ತಾವಿಕವಾಗಿ ಸಾಹಿತಿ ವೀರ ಹನುಮಾನ ಮಾತನಾಡಿದರು. ಅಧ್ಯಕ್ಷತೆಯನ್ನು ಎಂ ವಿರುಪಾಕ್ಷಿ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ನರಸಮ್ಮ ನರಸಿಂಹಲು, ಹಿರಿಯ ಸದಸ್ಯ ಜಯಣ್ಣ, ಮುಖಂಡರಾದ ಅಂಬಣ್ಣ ಅರೋಲಿಕರ್, ಬಾಲಸ್ವಾಮಿ ಕೊಡ್ಲಿ, ರವೀಂದ್ರ ಜಲ್ದಾರ್, ಸಾಹಿತಿ ಅಮರೇಶ ಬಲ್ಲಿದ, ಹೇಮಲತಾ ಸತೀಶ, ಪಾಮಯ್ಯ ಮುರಾರಿ, ನರಸಪ್ಪ ದಂಡೋರಾ, ಜೆ.ಬಿ. ರಾಜು, ಎಂ.ಪವನ್ಕುಮಾರ್, ಜಗನ್ನಾಥ್ ಸುಂಕಾರಿ, ಎನ್.ಮಹಾವೀರ, ಎಂ.ಕೆ ನಾಗರಾಜ, ಅಮರೇಶ, ಜನಾರ್ಧನ ಹಳ್ಳಿಬೆಂಚಿ, ಭೀಮಣ್ಣ ಮಂಚಾಲ, ಹೆಚ್ ಪದ್ಮಾ ಹಾಗೂ ಮತ್ತಿತರರಿದ್ದರು,. ಕೆ.ಪಿ ಅನಿಲ್ ಕುಮಾರ ನಿರೂಪಿಸಿದರು.ಮಾದರ ಚನ್ನಯ್ಯ ಪುತ್ಥಳಿ ಅನಾವರಣಮಾದರ ಚನ್ನಯ್ಯ ಜಯಂತೋತ್ಸವ ಹಿನ್ನೆಲೆಯಲ್ಲಿ ರಾಯಚೂರು ನಗರದ ಅಶೋಕ ಡೀಪೋ ಸರ್ಕಲ್‌ನಲ್ಲಿ ಮಾದರ ಚನ್ನಯ್ಯ ವೃತ್ತದಲ್ಲಿ ಪುತ್ಥಳಿಯನ್ನು ಗಣ್ಯರು ಅನಾವರಣಗೊಳಿಸಿದರು. ಅದ್ಧೂರಿ ಮೆರವಣಿಗೆಮಾದರ ಚನ್ನಯ್ಯ ಜಯಂತ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದ ಅಶೋಕ ಡಿಪೋ ವೃತ್ತದಿಂದ ಮಾದರ ಚನ್ನಯ್ಯನವರ ಭಾವಚಿತ್ರದ ಮೆರವಣಿಗೆ ಆರಂಭಗೊಂಡು ಮಹಿಳಾ ಸಮಾಜದವರೆಗೆ ನಡೆಸಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು. ವಿವಿಧ ವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.ಕ್ರಾಂತಿ ಗೀತೆಗಳ ಆಕರ್ಷಣೆಜಯಂತ್ಯೋತ್ಸವ ಸಮಾರಂಭದಲ್ಲಿ ತೆಲಂಗಾಣದ ರಾಜ್ಯ ಕ್ರಾಂತಿಕಾರಿ ಗಾಯಕ ಏಪೂರಿ ಸೋಮನ್ನ ಮತ್ತು ಅವರ ತಂಡದ ಸದಸ್ಯರು ನಡೆಸಿಕೊಟ್ಟ ಕ್ರಾಂತಿ ಗೀತೆಗಳ ಗಾಯನವು ಪೇಕ್ಷಕರನ್ನು ಆಕರ್ಷಿಸಿತು. ಶೋಷಿತ ಸಮುದಾಯಗಳ ಬವಣೆ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕೊಡುಗೆಗಳು ಸೇರಿದಂತೆ ಪ್ರಸ್ತುತ ಸಮಾಜ ಅನುಭವಿಸುತ್ತಿರುವ ಅಂಶಗಳನ್ನೊಳಗೊಂಡ ದಾಟಿಯ ತಮ್ಮ ಹಾಡುಗಳ ಮೂಲಕ ಸಮಾಜದ ಯುವಕರಿಗೆ ಜಾಗೃತಿ ಮೂಡಿಸಿದ ಪ್ರಯತ್ನವು ಕಾರ್ಯಕ್ರಮಕ್ಕೆ ಶೋಭೆ ತಂದಿದೆ.