ಸೂರ್ಯ ಗುಹೆ ಬಳಿ ಗಾಂಜಾಸೊಪ್ಪು ಗಿಡಗಳು ಪತ್ತೆ

| Published : Dec 16 2024, 12:49 AM IST

ಸಾರಾಂಶ

ಬೀರದೇನಹಳ್ಳಿಯ ತಂಗುದಾಣದ ಹಿಂಭಾಗ ಗಾಂಜಾಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕೊರಟಗೆರೆ ಪಿಎಸೈ ಚೇತನಕುಮಾರ್ ನೇತೃತ್ವದ ಪೊಲೀಸರ ತಂಡ ಮಾರುವೇಷದಲ್ಲಿ ದಿಢೀರ್ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಇತ್ತೀಚಿಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಬೀರದೇನಹಳ್ಳಿಯ ತಂಗುದಾಣದ ಹಿಂಭಾಗ ಗಾಂಜಾಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕೊರಟಗೆರೆ ಪಿಎಸೈ ಚೇತನಕುಮಾರ್ ನೇತೃತ್ವದ ಪೊಲೀಸರ ತಂಡ ಮಾರುವೇಷದಲ್ಲಿ ದಿಢೀರ್ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಇತ್ತೀಚಿಗೆ ನಡೆದಿದೆ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ಬೀರದೇನಹಳ್ಳಿ ತಂಗುದಾಣದಲ್ಲಿ ಗಾಂಜಾಸೊಪ್ಪು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಗಾಂಜಾ ಪೇಡ್ಲರ್‌ಗಳಿಂದ ೧ಲಕ್ಷ ೫೦ಸಾವಿರ ಮೌಲ್ಯದ ೨ಕೆಜಿ ೪೦೦ಗ್ರಾಂ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಸಿದ್ದರಬೆಟ್ಟದ ಸೂರ್ಯಗುಹೆ ಸಮೀಪದ ಅರಣ್ಯದಲ್ಲಿ ಗಾಂಜಾಸೊಪ್ಪಿನ ಗಿಡಗಳನ್ನು ಬೆಳೆದು ಗಿಡ ಬಾಡಿದ ನಂತರ ಸೊಪ್ಪು ಮತ್ತು ಬೀಜ ಎರಡನ್ನು ಕೊರಟಗೆರೆ ಸೇರಿದಂತೆ ಇನ್ನೀತರ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೊರಟಗೆರೆ ಪೊಲೀಸರ ತಂಡ ಬೇದಿಸುವಲ್ಲಿ ಯಶಸ್ವಿ ಆಗಿದ್ದಾರೆ.ಸಿದ್ದರಬೆಟ್ಟದ ಹೇಮಂತ್ (೨೧) ಮತ್ತು ನೇಗಲಾಲದ ಭೀಮರಾಜು (೩೫) ಬಂಧಿತ ಆರೋಪಿಗಳು. ದಾಳಿಯ ವೇಳೆ ಪಿಎಸೈ ಚೇತನ್, ಸಿಬ್ಬಂಧಿಗಳಾದ ದೊಡ್ಡಲಿಂಗಯ್ಯ, ಮೋಹನ್, ಪ್ರದೀಪ್, ಸಿದ್ದರಾಮು ಇದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.