ಸಾಮೂಹಿಕ ರಾಜೀನಾಮೆ
KannadaprabhaNewsNetwork | Published : Oct 03 2023, 06:03 PM IST
ಕನ್ನಡಪ್ರಭ ವಾರ್ತೆ, ತರೀಕರೆ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಂಗಳೂರು ಜಿಲ್ಲೆ (ಪ್ರವೀಣ್ ಶೆಟ್ಟಿ ಬಣದ) ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಎಲ್ಲರೂ ಸಂಘಟನೆಯಲ್ಲಿ ಆಗುತ್ತಿರುವ ಹಲವಾರು ಸಮಸ್ಯೆಗಳಿಂದ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ ಸಂಘಟನೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳನ್ನು ಖಂಡಿಸಿ ಎಲ್ಲಾ ಪದಾದಿಕಾರಿಗಳು ರಾಜೀನಾಮೆ ನೀಡುತ್ತಿದ್ದೇವೆ ಎಂದು ಮಾಜಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಕಾಶಿ ತಿಳಿಸಿದ್ದಾರೆ. ವಿಶ್ವನಾಥ್ ಕಾಶಿ ಸೇರಿದಂತೆ ಹರೀಶ್ ಗೌಡ ತರೀಕೆರೆ ತಾಲೂಕು ಅಧ್ಯಕ್ಷರು. ವಿಜಯ ಕುಮಾರ್ ಕಡೂರು ತಾಲೂಕು ಅಧ್ಯಕ್ಷರು. ದಿನೇಶ್ ಶಿವಪುರ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರು. ತರೀಕೆರೆ ತಾಲೂಕು ಗೌರವ ಅಧ್ಯಕ್ಷ ಪ್ರಕಾಶ್. ವಿದ್ಯಾರ್ಥಿ ಘಟಕದ ಅಧ್ಯಕ್ಷ ಚೇತನ್ ನಾಯಕ್, ತಾಲೂಕು ಕಾರ್ಯದರ್ಶಿ ನಾಗೇಂದ್ರ ಕುಮಾರ ಮತ್ತು ಉಪಾಧ್ಯಕ್ಷ ಅರುಣ್ ಗೌಡ. ಕಡೂರು ತಾಲೂಕಿನ ಎಲ್ಲಾ ಪದಾಧಿಕಾರಿಗಳು. ಚಿಕ್ಕಮಗಳೂರು ಜಿಲ್ಲೆಯ ಪದಾಧಿಕಾರಿಗಳು. ಅಜ್ಜಂಪುರ ತಾಲೂಕಿನ ಪದಾಧಿಕಾರಿಗಳು. ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಕಿರಣ್. ಲಕ್ಕವಳ್ಳಿ ಹೋಬಳಿ ಕಾರ್ಯಕರ್ತರು. ಅಮೃತಪುರ ಹೋಬಳಿ ಅಧ್ಯಕ್ಷ ವಿನಯ್ ಹುಣಸೆಘಟ್ಟ. ಕಾರ್ಯಕರ್ತರು. ಲಿಂಗದಹಳ್ಳಿ ಹೋಬಳಿ ಕಾರ್ಯಕರ್ತರು. ಕಸಬಾ ಹೋಬಳಿ ಕಾರ್ಯಕರ್ತರು. ತಾಲೂಕಿನ ಎಲ್ಲಾ ಗ್ರಾಮ ಘಟಕಗಳು. ಎಲ್ಲ ಹೋಬಳಿ ಘಟಕಗಳು, ತಾಲೂಕು ಕಾರ್ಯಕರ್ತರು. ನಗರ ಘಟಕದ ಅಧ್ಯಕ್ಷರು. ನಗರ ಘಟಕದ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿದರು. 2ಕೆಟಿಆರ್-ಕೆ5ಃ ತರೀಕೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲೆ ಪ್ರವೀಣ್ ಶೆಟ್ಟಿ ಬಣದ ಮುಖಂಡರುಗಳು ಸಾಮೂಹಿಕ ರಾ್ಜೀನಾಮೆ ನೀಡಿದ್ದಾರೆ.