ಸಾರಾಂಶ
ಮುಂಡಗೋಡ: ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಸಾಹಿತ್ಯದ ಕೊಡುಗೆ ನೀಡಿ ಕನ್ನಡ ಸಾಹಿತ್ಯವನ್ನು ಮೇರು ರೀತಿಯಲ್ಲಿ ತಂದಂತಹ ಕೀರ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ ಅವರಿಗೆ ಸಲ್ಲುತ್ತದೆ ಎಂದು ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ.ಪಿ.ಪಿ ಛಬ್ಬಿ ಹೇಳಿದರು.ಇಲ್ಲಿಯ ನಿವೃತ್ತ ಸರ್ಕಾರಿ ನೌಕರ ಭವನದಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಲಾದ ಜ್ಞಾನಪೀಠ ಪ್ರಶಸ್ತಿ ವಿಜೇತ ದಿ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡದ ಆಸ್ತಿ ಎಂದೇ ಹೆಸರುವಾಸಿಯಾದ ದಿ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಣ್ಣ ಕಥೆಗಳ ಜನಕ ಹಾಗೂ ವಿವಿಧ ರೀತಿಯಲ್ಲಿ ಸಾಹಿತ್ಯವನ್ನು ಬೆಳೆಸಿ ಕನ್ನಡ ಭಾಷೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಯಲು ಸಾಕ್ಷಿಯಾಗಿದ್ದಾರೆ ಇಂದು ಅವರ ಜನ್ಮ ದಿನಾಚರಣೆ ಆಚರಿಸುತ್ತಿರುವುದು ಮುಂಡಗೋಡ ತಾಲೂಕು ಕಸಾಪಗೆ ಹೆಮ್ಮೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಾ. ರಮೇಶ ಅಂಬಿಗೇರ ಹಾಗೂ ಸಾಹಿತಿ ಬಾಲಚಂದ್ರ ಹೆಗಡೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕುರಿತು ಮಾತನಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ರಾಮಚಂದ್ರ ಕಲಾಲ, ಸಂಗಪ್ಪ ಕೋಳೂರು, ಆನಂದ ಹೊಸೂರು, ಮೋಹನ ಕಲಾಲ, ಮಾಳಿ ಮುಂತಾದವರು ಉಪಸ್ಥಿತರಿದ್ದರು. ಎಸ್ ಎನ್ ಸುರಕೋಡ ಪ್ರಾರ್ಥನೆ ಸಲ್ಲಿಸಿದರು. ಎಸ್. ಬಿ. ಹೂಗಾರ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಎಸ್ ಡಿ ಮುಡೆಣ್ಣವರ ನಿರೂಪಿಸಿದರು. ರಮೇಶ ಪವಾರ ವಂದಿಸಿದರು.
ಮುಂಡಗೋಡದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಜರುಗಿತು.