ಸಾರಾಂಶ
- ಆದಿಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಜನಜಾಗೃತಿ ಸಮಾರಂಭದಲ್ಲಿ ಮುಖಂಡ ಅಥಣಿ ವೀರಣ್ಣ ಸಲಹೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಪ್ರಸ್ತುತ ದಿನಗಳಲ್ಲಿ ರಾಜಕೀಯವು ಪರಿಸ್ಥಿತಿ ಸೂಕ್ಷ್ಮವಾಗುತ್ತಿದ್ದು, ವೀರಶೈವ ಲಿಂಗಾಯತ ನಾಯಕರು ರಾಜಕೀಯವಾಗಿ ಬೆಳೆಯುವ ಜೊತೆಗೆ ಸರ್ಕಾರದ ಪ್ರಮುಖ ಹುದ್ದೆಗಳನ್ನು ನಿರ್ವಹಿಸುವಂತಹ ಪ್ರತಿಭೆ, ಶಕ್ತಿ ಪಡೆಯಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ ಹೇಳಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಆದಿಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಜನಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯದ ನಾಯಕರು ಉನ್ನತ ರಾಜಕೀಯ ಹುದ್ದೆಗಳನ್ನೇ ಅಲಂಕರಿಸುವಂತಾಗಬೇಕು ಎಂದರು.ರಾಜ್ಯದಲ್ಲಿ ಶೇ.21ರಷ್ಟು ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯವು ಸರ್ಕಾರ ಕೈಗೊಂಡಿದ್ದ ಜನಗಣತಿಯಲ್ಲಿ ಶೇ.14ರಷ್ಟು ಮಾತ್ರ ಇದೆಯೆಂಬ ಮಾಹಿತಿ ಲಭಿಸಿದೆ. ಒಂದುವೇಳೆ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ನಮ್ಮ ಸಮುದಾಯದ ಅಂಕಿಅಂಶ ನೀಡಿದ್ದರೆ ಜನಗಣತಿ ಬಗ್ಗೆಯೇ ಅನುಮಾನಗಳು ಮೂಡುತ್ತವೆ. ಇಂತಹ ಜಾತಿಗಣತಿ ವರದಿ ಈಗಾಗಲೇ ಮಹಾಸಭಾ ತೀವ್ರ ವಿರೋಧವನ್ನೇ ವ್ಯಕ್ತಪಡಿಸಿದೆ. ಒಕ್ಕಲಿಗ ಸಮಾಜ ನಮ್ಮೊಂದಿಗೆ ಧ್ವನಿಗೂಡಿಸಿದೆ ಎಂದು ತಿಳಿಸಿದರು.
ಮಹಾಸಭಾ ಈಗಾಗಲೇ ಜಾತಿಗಣತಿ ವರದಿಯ ಅಂಕಿ ಅಂಶದ ಬಗ್ಗೆ ವಿರೋಧ ವ್ಯಕ್ತಪಡಿಸಿದೆ. ಇಂತಹ ವಿಚಾರದ ಬಗ್ಗೆ ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಕೆಲ ವರ್ಷಗಳ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಹುನ್ನಾರ ನಡೆದಿದ್ದವು. ಆಗ ಪಕ್ಷಕ್ಕಿಂತಲೂ ಸಮಾಜ ಹಿತಾಸಕ್ತಿ ಮುಖ್ಯವೆಂದು ಧ್ವನಿ ಎತ್ತಿದವರು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಸಮಾಜದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ. ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬುದನ್ನು ಸಮಾಜ ಬಾಂಧವರೂ ಅರ್ಥ ಮಾಡಿಕೊಳ್ಳಬೇಕು. ಇಡೀ ಸಮಾಜ ಒಂದಾಗಿ ನಿಲ್ಲುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ, ಹಕ್ಕು, ಅವಕಾಶಗಳು ಸಿಗುವಂತೆ ಸಂಘಟಿತ ಶಕ್ತಿಯಾಗಿ ಸಮಾಜ ನಿಲ್ಲಬೇಕು ಎಂದು ವೀರಣ್ಣ ಮನವಿ ಮಾಡಿದರು.ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಅಪೂರ್ಣ ಹೋಟೆಲ್ ಸಮೂಹಗಳ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಶ್ರೀ ರೇಣುಕಾಚಾರ್ಯರು, ಶ್ರೀ ಬಸವಣ್ಣ ಸೇರಿದಂತೆ ಎಲ್ಲ ಮಹನೀಯರು ಜೀವನ ಸುಧಾರಣೆ ಸಂದೇಶ ಸಾರಿದ್ದಾರೆ. ಮಠಾಧೀಶರು ಸಹ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಗುರು ರೇಣುಕಾಚಾರ್ಯರ ಕಾಲದಿಂದ ಶಿಕ್ಷಣ, ಅನ್ನ ದಾಸೋಹ, ಸಮಾಜ ಜಾಗೃತಿ ಕಾರ್ಯರು ನಿರಂತರವಾಗಿ ನಮ್ಮ ನೆಲದಲ್ಲಿ ನಡೆದುಕೊಂಡೇ ಬರುತ್ತಿದೆ. ಇಂದಿಗೂ ಅಂತಹ ಪರಂಪರೆ ನಮ್ಮ ನಾಡಿನ ಮಠಗಳು ಮುಂದುವರಿಸುತ್ತಿವೆ ಎಂದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರು ಓಂಕಾರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆ ಶಿಲಾ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ದಾ-ಹ ಅರ್ಬನ್ ಕೋ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ, ಮಹಾಸಭಾ ಗೌರವಾಧ್ಯಕ್ಷ ಎಸ್.ಜಿ.ಉಳುವಯ್ಯ, ಜಿಲ್ಲಾಧ್ಯಕ್ಷ ಚಂದ್ರಣ್ಣ ಐಗೂರು, ತಾಲೂಕು ಅಧ್ಯಕ್ಷ ಶಂಭು ಎಸ್.ಉರೇಕೊಂಡಿ, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಣಮ್ಮ, ಯುವ ಘಟಕದ ಅಧ್ಯಕ್ಷ ಅಜಿತ್, ಮುಖಂಡರಾದ ಎಚ್.ಎಂ.ರುದ್ರಮುನಿಸ್ವಾಮಿ, ರಾಜಶೇಖರ ಗುಂಡಗತ್ತಿ, ಜಯಪ್ರಕಾಶ ಮಾಗಿ, ಸೋಮಣ್ಣ, ಹನುಮಂತಪ್ಪ ಇತರರು ಇದ್ದರು.ಕನ್ನಡ ಪಂಡಿತ ಶತಾಯುಷಿ ಎಸ್.ಎಂ. ರುದ್ರಮುನಿಯಯ್ಯ ಅವರಿಗೆ ಆದಿ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಮಾರಂಭಕ್ಕೂ ಮುನ್ನ ಶ್ರೀ ರೇಣುಕರ ಭಾವಚಿತ್ರವನ್ನು ಸಾರೋಟು ಮೂಲಕ ಡಿಸಿ ಕಚೇರಿಯಿಂದ ರೇಣುಕಾ ಮಂದಿರವರೆಗೆ ಅದ್ಧೂರಿ ಮೆರವಣಿಗೆಯಲ್ಲಿ ತರಲಾಯಿತು.
- - -* ಟಾಪ್ ಕೋಟ್ ಜನರಲ್ಲಿ ಜಾಗೃತಿ ಮೂಡಿಸಲು, ಶಾಂತಿ, ಸುವ್ಯವಸ್ಥೆ, ನೆಮ್ಮದಿ ನೆಲೆಸಲಿ ಎಂಬುದು ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪೂಜ್ಯರು, ಮಹನೀಯರು, ಸಾಧಕರ ಜಯಂತಿ ಆಚರಿಸಲಾಗುತ್ತಿದೆ. ಈ ಮೂಲಕ ಅಂತಹವರ ಆದರ್ಶ, ಧ್ಯೇಯ ಪಾಲನೆ ಮಾಡೋಣ
- ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.- - - -12ಕೆಡಿವಿಜಿ1, 2.ಜೆಪಿಜಿ:
ದಾವಣಗೆರೆಯಲ್ಲಿ ಬುಧವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ನಡೆಯಿತು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಶ್ರೀಗಳು, ಅಣಬೇರು ರಾಜಣ್ಣ ಮತ್ತಿತರರು ಇದ್ದರು.