ಒಳಮೀಸಲಾತಿಗಾಗಿ ಆಗ್ರಹಿಸಿ ಏ.19ರಂದು ಪ್ರತಿಭಟನೆ

| Published : Mar 13 2025, 12:49 AM IST

ಸಾರಾಂಶ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏ.೧೯ರಂದು ನಡೆಯುವ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ನಾವು ಸಿದ್ದರಿದ್ದೇವೆ ಎಂದು ದಲಿತ ಸಂರಕ್ಷಣಾ ಸಮಿತಿ ರಾಜ್ಯಸಂಚಾಲಕ ಟೈಗರ್‌ನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏ.೧೯ರಂದು ನಡೆಯುವ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ನಾವು ಸಿದ್ದರಿದ್ದೇವೆ ಎಂದು ದಲಿತ ಸಂರಕ್ಷಣಾ ಸಮಿತಿ ರಾಜ್ಯಸಂಚಾಲಕ ಟೈಗರ್‌ನಾಗ್ ತಿಳಿಸಿದರು.ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಕೊರಟಗೆರೆ ಒಕ್ಕೂಟದಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಒಳಮೀಸಲಾತಿ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ತ್ವರಿತವಾಗಿ ಜಾರಿ ಮಾಡದೇ ಇದ್ದರೇ ಕೊರಟಗೆರೆ ಕ್ಷೇತ್ರದಿಂದಲೇ ಮತ್ತೊಂದು ಬಾರಿ ಹೋರಾಟದ ರೂಪುರೇಷೇ ಸಿದ್ದವಾಗುತ್ತದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ್ ನಮ್ಮ ಮನವಿಯನ್ನು ಆಲಿಸಿ ಚುನಾವಣೆ ವೇಳೆ ನೀಡಿದ ದಲಿತರ ಒಳಮೀಸಲಾತಿ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹ ಮಾಡಿದರು.ಕೊರಟಗೆರೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ ದಲಿತಪರ ಸಂಘಟನೆಗಳ ೩೫ವರ್ಷದ ಹೋರಾಟದ ಪ್ರತಿಫಲಕ್ಕೆ ಸುಪ್ರಿಂಕೋರ್ಟ್ ನಮ್ಮ ಪರವಾಗಿ ಆದೇಶ ಮಾಡಿದೆ. ರಾಜ್ಯ ಸರಕಾರ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಬೇಕು. ರಾಜಕೀಯ ಕುತಂತ್ರಕ್ಕೆ ಯಾವುದೇ ಸೋಪ್ಪುಹಾಕದೇ ದಲಿತರ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲವಾದ್ರೇ ಹೋರಾಟ ಅನಿವಾರ್ಯ ಎಂದರು.ಕೊರಟಗೆರೆ ದಲಿತ ಮುಖಂಡ ವೆಂಕಟೇಶ್ ಮಾತನಾಡಿ ಒಳಮೀಸಲಾತಿ ಜಾರಿ ಮಾಡಿ ಅಥವಾ ಖುರ್ಚಿ ಖಾಲಿ ಮಾಡಿ ಎಂಬ ಧ್ಯೇಯದೊಂದಿಗೆ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಸಮಾವೇಶ ಮಾ.೧೯ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸುಪ್ರೀಂಕೋರ್ಟಿನ ಆದೇಶವನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯ ಜಾರಿಗೆ ತಂದಿವೆ. ಆದರೇ ಕರ್ನಾಟಕ ಸರ್ಕಾರ ರಾಜಕೀಯ ಕುತಂತ್ರದಿಂದ ಮೂಲೆಗುಂಪು ಮಾಡಿದೆ ಎಂದು ಆರೋಪ ಮಾಡಿದರು.ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರಾದ ದೊಡ್ಡಯ್ಯ, ವೀರಕ್ಯಾತರಾಯ, ನರಸಿಂಹಮೂರ್ತಿ, ಶಿವರಾಮಯ್ಯ, ಜಗದೀಶ್, ಮಂಜುನಾಥ ಸೇರಿದಂತೆ ಇತರರು ಇದ್ದರು.