ಗುರಿ ಸಾಧಿಸಲು ಮನಸ್ಸು, ಶ್ರದ್ದೆ ನಿಷ್ಠೆ ಬಹಳ ಪ್ರಾಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Jun 30 2025, 12:34 AM IST

ಗುರಿ ಸಾಧಿಸಲು ಮನಸ್ಸು, ಶ್ರದ್ದೆ ನಿಷ್ಠೆ ಬಹಳ ಪ್ರಾಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮನಸ್ಸಿದ್ದರೆ ಮಾರ್ಗ ಹಾಗೆಯೇ ನಮ್ಮ ಗುರಿ ಸಾಧಿಸಲು ಮನಸ್ಸು, ಶ್ರದ್ಧೆ, ನಿಷ್ಠೆ ಬಹಳ ಮುಖ್ಯ ಎಂದು ಶಾಸಕ ಜಿ.ಎಚ್ . ಶ್ರೀನಿವಾಸ್ ಹೇಳಿದರು.

ತಾಲೂಕು ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ । ನಿವೃತ್ತ ನೌಕರರಿಗೆ ಸನ್ಮಾನ । ಕನಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಮನಸ್ಸಿದ್ದರೆ ಮಾರ್ಗ ಹಾಗೆಯೇ ನಮ್ಮ ಗುರಿ ಸಾಧಿಸಲು ಮನಸ್ಸು, ಶ್ರದ್ಧೆ, ನಿಷ್ಠೆ ಬಹಳ ಮುಖ್ಯ ಎಂದು ಶಾಸಕ ಜಿ.ಎಚ್ . ಶ್ರೀನಿವಾಸ್ ಹೇಳಿದರು.

ಭಾನುವಾರ ತಾಲೂಕು ಕನಕ ನೌಕರರ ಸಂಘ ತರೀಕೆರೆಯಿಂದ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ತಾಲೂಕು ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ, ಕನಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಅಭಿನಂದನೆ, ನಿವೃತ್ತ ನೌಕರರಿಗೆ ಸನ್ಮಾನ, ಸಮಾಜಮುಖಿ ಕಾರ್ಯ ಮಾಡುತ್ತಿರುವರಿಗೆ ಸನ್ಮಾನ, ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುವ ಈ ಕಾರ್ಯಕ್ರಮ ಬಹಳ ಉತ್ತಮವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿಸುತ್ತಿರುವ ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಕನಕ ಶ್ರೀ ಪ್ರಶಸ್ತಿಗೆ ಪಾತ್ರ ರಾಗಿದ್ದು ಎಲ್ಲ ರಾಷ್ಚ್ರೀಯ ಹಬ್ಬಗಳಲ್ಲಿ ಭಾಗವಹಿಸುತ್ತಾರೆ. ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಅವರಿಗೆ ಉಜ್ವಲ ಭವಿಷ್ಯ ಇದೆ. ಪಟ್ಟಣದ ಟಿ.ಬಿ.ಕಾರ್ತಿಕ್ ಯುಪಿಎಸ್.ಸಿಯಲ್ಲಿ 44ನೇ ರ್‍ಯಾಂಕ್ ಪಡೆದು ತರೀಕೆರೆಗೆ ಕೀರ್ತಿ ತಂದಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾಗಲು ಸಮಾಜದ ದೊಡ್ಡ ಕೊಡುಗೆ ಇದೆ ಎಂದು ನುಡಿದರು.ಗುರಿ ಇದ್ದರೆ ಖಂಡಿತ ಸಾಧನೆ ಮಾಡಲು ಸಾಧ್ಯ, ಉನ್ನತ ಹುದ್ದೆಗೆ ಹೋಗಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗಬೇಕು. ₹61 ಕೋಟಿಗಳಲ್ಲಿ ಪಟ್ಟಣದ ಬಿ.ಎಚ್.ರಸ್ತೆ, ಟೌನ್ ಹಾಲ್ ಮತ್ತು ಬಸ್ಟ್ಯಾಂಡ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಹತ್ತು-ಹನ್ನೆರಡು ಕೋಟಿಗಳಲ್ಲಿ ಪಟ್ಟಣದ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದ ಅವರು ಅರ್ಥಿಕ ತಜ್ಞರಾದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ನುಡಿದಂತೆ ನಡೆಯುತ್ತಾರೆ ಎಂದು ಹೇಳಿದರು.ಬೆಂಗಳೂರು ಯುಪಿಎಸ್.ಎಸ್ಸಿ ಕೋಚಿಂಗ್ ಸೆಂಟರ್, ಇನ್.ಸೈಟ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಮಾತನಾಡಿ ಪ್ರತಿಭೆ ಬೆಳೆಯಲು ಅವಕಾಶ ಮತ್ತು ಸ್ವಾತಂತ್ರ್ಯ ಇರಬೇಕು. ಇನ್ನೊಬ್ಬರನ್ನು ಬೆಳೆಸಬೇಕು. ಕಷ್ಟದಲ್ಲಿರು ವವರಿಗೆ ಸಹಾಯ ಮಾಡುವ ಉದಾರತೆ ಇದ್ದರೆ ಪ್ರತಿಭೆಗಳಿಗೆ ಉತ್ತೇಜನ ದೊರೆಯುತ್ತದೆಎಂದರು.

ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಂಡರೆ ಜ್ಞಾನ ಸಂಪಾದನೆ ಸಾಧ್ಯ. ಸ್ವಯಂ ಪ್ರೇರಿತರಾಗಿ ಪುಸ್ತಕ ಓದುವುದು, ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನವಾಗಲಿದೆ. ಸಾಹಿತ್ಯ ಓದುವ ಅಭಿರುಚಿ ಅಗತ್ಯ, ಅಸಾಧ್ಯ ಎನ್ನುವುದನ್ನು ಸಾಧ್ಯ ಮಾಡಬೇಕು ಎಂದು ಹೇಳಿದರು.ಸಹಕಾರ ರತ್ನ ಪ್ರಶಸ್ತಿ ಪುರಸ್ಕತ ಎಂ.ನರೇಂದ್ರ ಮಾತನಾಡಿ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಸಂತೋಷ ತಂದಿದೆ. ಬೆಂಗಳೂರು ಬಿಬಿಎಂಪಿ ಎಇಇ ಎಚ್.ಕೆ.ತಿಪ್ಪೇಶ್ ಅರ್ಥಿಕ ಸಹಾಯ ಮಾಡಿದ್ದಾರೆ. ಮಕ್ಕಳು ವಿದ್ಯಾವಂತ ರಾಗಬೇಕು. ಕುರುಬ ಸಮಾಜದ ಸಹಕಾರ ಸಂಘ ಸ್ಥಾಪಿಸಬೇಕು. ನಮ್ಮ ತಂದೆ-ತಾಯಿ ಹೆಸರಿನಲ್ಲಿ ₹1 ಲಕ್ಷ ಠೇವಣಿ ಇಡುವ ಆಶಯ ಹೊಂದಿದ್ದೇನೆ. ಕುರುಬ ಸಮಾಜ ಮತ್ತು ತಾಲೂಕು ಕನಕ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಬೇಕು. ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮ ನಡೆಯಬೇಕು. ಜಾತಿ ಗಣತಿ ಜಾರಿಗೆ ತಂದರೆ ಅರ್ಥಿಕ, ಸಾಮಾಜಿಕವಾಗಿ ಮೀಸಲಾತಿ ಹೆಚ್ಚುತ್ತದೆ. ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಸತತ ಮೂರು ವರ್ಷಗಳಿಂದ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದೆ. ಸಮಾಜಯಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ, ಕಾರ್ತಿಕ್ ಟಿ.ಬಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೋವಿಂದಪ್ಪ, ಬೆಂಗಳೂರು ಬಿಬಿಎಂಪಿ ಎಇಇ ಎಚ್.ಕೆ. ತಿಪ್ಪೇಶ್, ಬೆಂಗಳೂರು ಬೆಸ್ಕಾಂ ಎಇಇ ಸಿ.ಮಲ್ಲಿಕಾರ್ಜುನ್, ಪುರಸಭೆ ಸದಸ್ಯೆ ಗಿರಿಜಾ ಪ್ರಕಾಶ್ ವರ್ಮ, ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್, ಯುಪಿಎಸ್ಸಿ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್ ಪಡೆದ ಕಾರ್ತಿಕ್ ಟಿ.ಬಿ.ಶಿಕ್ಷಕ ಎಂ.ಬಿ.ರಾಮಚಂದ್ರಪ್ಪ, ಎಸ್.ಟಿ. ತಿಪ್ಪೇಶಪ್ಪ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ, ಶಾಸಕರ ಅಪ್ತ ಸಹಾಯಕ ಡಿ.ಶ್ರೀನಿವಾಸ್, ತಾಲೂಕು ಕನಕ ನೌಕರರ ಸಂಘದ ಪದಾದಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

29ಕೆಟಿಆರ್.ಕೆ.10ಃ

ತರೀಕೆರೆಯಲ್ಲಿ ತಾಲೂಕು ಕುರುಬ ಸಮಾಜದಿಂದ ನಡೆದ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜಪ್ಪ ಮತ್ತಿತರು ಇದ್ದರು.