ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಸ್ವಾತಂತ್ರ್ಯ ದಿನಾಚರಣೆಯನ್ನ ತಾಲೂಕು ಕ್ರೀಡಾಂಗಣದಲ್ಲಿ ಶಿಸ್ತು ಬದ್ಧವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಮೂರು ದಿನಗಳ ಕಾಲ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದರು. ದಿನಾಚರಣೆ ಪ್ರಯುಕ್ತ ನಾನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೨ ಮಂದಿಯನ್ನು ಗೌರವಿಸಲಾಗುವುದು ಎಂದರು. ಅಚ್ಚುಕಟ್ಟಾಗಿ ನಡೆಯಲು ನಾಲ್ಕು ದಿನಗಳ ಕಾಲ ತಾಳಿಸಬೇಕು ತಾಲಿಮಿನಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹಾಲು ಮತ್ತು ಬಿಸ್ಕತ್‌ನ ವ್ಯವಸ್ಥೆ ಮಾಡಲಾಗುವುದು ಎಂದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅವಕಾಶ ನೀಡಲಾಗುವುದು ಎಂದರು.

ತಹಸೀಲ್ದಾರ್‌ ಬಿ ಎಸ್ ಶಂಕರಪ್ಪ ತಾಲೂಕು ಪಂಚಾಯಿತಿ ಇಒಜಿ ಆರ್‌ ಹರೀಶ್ ಪುರಸಭಾ ಮುಖ್ಯ ಅಧಿಕಾರಿ ಆರ್‌ ಯತೀಶ್ ಕುಮಾರ್‌ ಗಿರೀಶ್ ಬಾಬು ಕೆಡಿಪಿ ನಾಮ ನಿರ್ದೇಶಕ ಸದಸ್ಯರಾದ ಯೋಗೇಶ್ ಮಹೇಶ್ ಬಿ ಒಎಚ್ಎಚ್ ಸತೀಶ್, ಸಮಾಜ ಸೇವಕರಾದ ರಾಜ್‌ಕುಮಾರ್‌, ಮೀಸೆಮಂಜಣ್ಣ, ತೇಜಸ್‌ಗೌಡ, ಸೋಮಶೇಖರ್, ದಮ್ಮನಿಂಗಲ ಶಂಕರ್‌, ಮಹದೇವ್ ಮತ್ತಿತರಿದ್ದರು.