ಕುಶಾಲನಗರ: ಎಟಿಎಂ ಕೇಂದ್ರದಲ್ಲಿ ಬಿಟ್ಟಿದ್ದ ಮೊಬೈಲ್‌ನ್ನು ಯವಕನೊಬ್ಬ ಕದ್ದಿರುವ ಘಟನೆ ಕುಶಾಲನಗರ ಗುಡ್ಡೆಹೊಸೂರಿನ ಎಟಿಎಂ ಕೇಂದ್ರದಲ್ಲಿ ನಡೆದಿದೆ.ಗುಡ್ಡೆಹೊಸೂರಿನ ಗ್ರಾಮೀಣ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಕುಶಾಲನಗರದ ರಾಜೇಶ್ ಮೊಬೈಲ್ ಮರೆತು ಹೋಗಿದ್ದರು. ಹಣ ತೆಗೆದುಕೊಂಡು ಮೊಬೈಲ್ ಮರೆತು ಬಿಟ್ಟು ಹೋಗಿದ್ದರು. ಈ ವೇಳೆ ಹಣಕ್ಕಾಗಿ ಎಟಿಎಂಗೆ ಬಂದಿದ್ದ ಯುವಕ, ಎಟಿಎಂ ನಿಂದ ಹಣ ತೆಗೆದುಕೊಂಡು ಮಷಿನ್ ಮೇಲೆ ಇದ್ದ ಮೊಬೈಲ್‌ ತೆಗೆದುಕೊಂಡುಹೋಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.