ಮೂಲ್ಕಿ ವಿಜಯಾಕಾಲೇಜು ವಾರ್ಷಿಕೋತ್ಸವ, ಸ್ಥಾಪಕರ ದಿನಾಚರಣೆ

| Published : Apr 24 2025, 12:00 AM IST

ಮೂಲ್ಕಿ ವಿಜಯಾಕಾಲೇಜು ವಾರ್ಷಿಕೋತ್ಸವ, ಸ್ಥಾಪಕರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ್ಕಿ ವಿಜಯ ಕಾಲೇಜಿನಲ್ಲಿ ಜರಗಿದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಣಿಪಾಲದ ಅಕಾಡೆಮಿ ಆಫ್‌ ಜನರಲ್‌ ಎಜ್ಯುಕೇಶನ್‌ ಆಡಳಿತಾಧಿಕಾರಿ ಡಾ.ಕೆ. ಶ್ರೀಧರ ರಂಗನಾಥ ಪೈ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪದವಿ ಶಿಕ್ಷಣವೆನ್ನುವುದು ಅಧ್ಯಯನಶೀಲತೆ, ಸಂಶೋಧನೆ, ವಿಶ್ಲೇಷಣೆಯ ಒಂದು ಸಮಗ್ರ ಹಾಗೂ ನಿರಂತರ ಪ್ರಕ್ರಿಯೆ ಎಂದು ಮಣಿಪಾಲದ ಅಕಾಡೆಮಿ ಆಫ್‌ ಜನರಲ್‌ ಎಜ್ಯುಕೇಶನ್‌ ಆಡಳಿತಾಧಿಕಾರಿ ಡಾ.ಕೆ. ಶ್ರೀಧರ ರಂಗನಾಥ ಪೈ ಹೇಳಿದ್ದಾರೆ.

ಮೂಲ್ಕಿ ವಿಜಯ ಕಾಲೇಜಿನಲ್ಲಿ ಜರಗಿದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉದ್ಯಮಿ ಡಾ.ಕೆ. ಪ್ರಕಾಶ ಶೆಟ್ಟಿ ಮಾತನಾಡಿ, ಕರಾವಳಿಯ ಯುವಕರಿಗಾಗಿ ಮಂಗಳೂರುನಲ್ಲಿ ಐ.ಟಿ. ಪಾರ್ಕ್ ಮಾಡುವ ತಮ್ಮ ಯೋಜನೆಗಳ ಮೂಲಕ ಸ್ಥಳೀಯ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸುವುದಾಗಿ ತಿಳಿಸಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸಿ.ಎ. ಶಂಕರ ಶೆಟ್ಟಿ ಮತ್ತು ಎಸ್.ಎನ್. ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಜಯಾ ಪದವಿ ಪೂರ್ವಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಪಮೀದಾ ಬೇಗಂ, ಕಚೇರಿ ಸಿಬ್ಬಂದಿ ಸಾವಿತ್ರಿ ವಿ, ನಾಗೇಶ್‌ ಎಸ್‌ ಕೋಟ್ಯಾನ್, ಜಯ ಸಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ರ‍್ಯಾಂಕ್ ವಿಜೇತ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಹಾಸ್ ಹೆಗ್ಡೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ವೆಂಕಟೇಶ್ ಭಟ್‌, ಆಡಳಿತ ಮಂಡಳಿ ಸದಸ್ಯರಾದ ಶಮೀನಾ ಆಳ್ವ, ಸ್ಯಾಮ್ ಮಾಬೆನ್, ಎಂ.ಬಿ.ಖಾನ್, ಸಿ.ಎ. ಶಿವರಾಮ್ ಕಾಮತ್, ಡಾ. ರೋಶನ್‌ಕುಮಾರ್ ಶೆಟ್ಟಿ, ಡಾ. ಶೈಲಜಾ ವೈ.ವಿ., ಎಸ್.ಎನ್. ಹೆಗ್ಡೆ, ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ವೆಂಕಟೇಶ್ ಭಟ್ ಸ್ವಾಗತಿಸಿದರು. ರಾಜೇಶ್ ಶೆಟ್ಟಿಗಾರ್ ನಿರೂಪಿಸಿದರು. ಸ್ವಾತಿ ಬಿ ಶೆಟ್ಟಿ ವಂದಿಸಿದರು.