ಹೋಟೆಲ್‌ ಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ; ಪ್ಲಾಸ್ಟಿಕ್‌ ವಶ

| Published : Mar 13 2025, 12:50 AM IST

ಸಾರಾಂಶ

ಪಟ್ಟಣದ ಬಸ್‌ ನಿಲ್ದಾಣ ಸುತ್ತಮುತ್ತ ಸೇರಿ ಹೋಟೆಲ್‌ ಹಾಗೂ ಪುಟ್‌ ಪಾತ್‌ ಅಂಗಡಿಗಳ ಮೇಲೆ ದಿಢೀರ್‌ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದ ತಂಡ ಬಳಕೆಗಾಗಿ ಇಟ್ಟುಕೊಂಡಿದ್ದ ಪ್ಲಾಸ್ಟಿಕ್‌ ಕವರ್‌ ಗಳನ್ನು ವಶ ಪಡಿಸಿಕೊಂಡು ಎಚ್ಚರಿಕೆ ನೀಡಿತು.

ಮಾಲೂರು: ಪಟ್ಟಣದ ಬಸ್‌ ನಿಲ್ದಾಣ ಸುತ್ತಮುತ್ತ ಸೇರಿ ಹೋಟೆಲ್‌ ಹಾಗೂ ಪುಟ್‌ ಪಾತ್‌ ಅಂಗಡಿಗಳ ಮೇಲೆ ದಿಢೀರ್‌ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದ ತಂಡ ಬಳಕೆಗಾಗಿ ಇಟ್ಟುಕೊಂಡಿದ್ದ ಪ್ಲಾಸ್ಟಿಕ್‌ ಕವರ್‌ ಗಳನ್ನು ವಶ ಪಡಿಸಿಕೊಂಡು ಎಚ್ಚರಿಕೆ ನೀಡಿತು. ಆಹಾರ ತಯಾರಿಕೆಗಳಲ್ಲಿ ಪ್ಲಾಸ್ಟಿಕ್‌ ಉಪಯೋಗಿಸುವುದರಿಂದ ಮಾರಕ ಕ್ಯಾನ್ಸರ್‌ ರೋಗ ಬರಲು ಕಾರಣವಾಗುತ್ತದೆ ಎಂಬ ಆರೋಗ್ಯ ಇಲಾಖೆಯ ಮಾಹಿತಿಯನ್ನು ಅನುಸರಿಸಿ, ಕಳೆದ ಒಂದು ವಾರದಿಂದ ಪ್ಲಾಸ್ಟಿಕ್ ಬಗ್ಗೆ ನಗರದಲ್ಲಿ ಅರಿವು ಮೂಡಿಸಿದ ಸಿಬ್ಬಂದಿ ಮಂಗಳವಾರ ರಾತ್ರಿ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಪಟ್ಟಣದ ಬಸ್‌ ನಿಲ್ದಾಣ, ಡಾ.ರಾಜ್‌ ವೃತ್ತ, ಅರಳೇರಿ ರಸ್ತೆಗಳಲ್ಲಿದ್ದ ಪುಟ್‌ ಪಾತ್‌ ಅಂಗಡಿಗಳ ಮೇಲೆ ದಾಳಿ ನಡೆಸಿ ಉಪಯೋಗಿಸಲು ಸಂಗ್ರಹಿಸಿದ್ದ ಪ್ಲಾಸ್ಟಿಕ್‌ ಕವರ್‌ ಗಳನ್ನು ವಶ ಪಡಿಸಿಕೊಂಡು ಪ್ಲಾಸ್ಟಿಕ್ ಬಳಸದಂತೆ ಅಂಗಡಿ ಮುಂಗಟ್ಟು ಮಾಲೀಕರಿಗೆ ಎಚ್ಚರಿಕೆ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಹಿರಿಯ ಆರೋಗ್ಯ ಅಧಿಕಾರಿ ಶ್ರೀನಿವಾಸ್‌ ,ರಾಜಣ್ಣ ಹಾಗೂ ಪುರಸಭೆ ಸಿಬ್ಬಂದಿಯಿದ್ದರು.