ಸಾರಾಂಶ
ಭಾರತೀಯ ಜನತಾ ಪಾರ್ಟಿಯಿಂದ ವೃತ್ತಿಪರರ ಸಭೆ
ಕನ್ನಡಪ್ರಭವಾರ್ತೆ ತರೀಕೆರೆವಿಕಸಿತ ಭಾರತದ ಕಾಲದಲ್ಲಿ ದೇಶ ಕಟ್ಟುವಂತಹ ಕಾರ್ಯ ಆಗಬೇಕು ಎಂದು ಶಿಕ್ಷಣ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ, ಮುಖ್ಯವಕ್ತಾರ ಎಂ.ಜಿ.ಭಟ್ ಹೇಳಿದ್ದಾರೆಶುಕ್ರವಾರ ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮಂಡಲದಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ವಿಕಸಿತ ಭಾರತ ಅಮೃತ ಕಾಲ, ಸೇವೆ ಸುಶಾಸನ ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ 11 ವರ್ಷ ಸಂದರ್ಭದಲ್ಲಿ ನಡೆದ ವೃತ್ತಿಪರರ ಸಭೆಯಲ್ಲಿ ಮಾತನಾಡಿದರು.
ರೈತರಿಗೆ ನಿಜವಾಗಿ ಸ್ಪಂದಿಸುತ್ತಿರುವುದು ಮೋದಿ ಸರ್ಕಾರ, ರೈತರ ಕಷ್ಟಕ್ಕೆ ಸ್ಪಂದಿಸಬೇಕು. ರೈತರ ಸಾಲ ಮನ್ನಾ ಮಾಡಿರುವುದು ಬಹಳ ಒಳ್ಳೆಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮದಿಂದ ರೈತರ ಬಾಳು ಹಸನು ಮಾಡಿದ್ದಾರೆ. ಅವರ ದೂರದೃಷ್ಟಿಯಿಂದ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ 4ನೇ ಸ್ಥಾನ ಪಡೆಯುವಂತಾಗಿದೆ. ಇದು ಅವರ ಸಾಧನೆ ಎಂದರು.ದೇಶದಲ್ಲಿ 1.46 ಲಕ್ಷ ಕಿ.ಮಿ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ ಇದು ನಿತಿನ್ ಗಡ್ಕರಿ ಅವರ ಸಾಧನೆ. ಭರತ ಭೂಮಿ ಪವಿತ್ರವಾದುದು ಸಾಧು ಸಂತರು ಇರುವ ದೇಶ, ಶ್ರೇಷ್ಠ ಸಂಸ್ಕೃತಿ, ಸಂಸ್ಕಾರ ಹೊಂದಿದ ದೇಶ ಭಾರತ ಎಂದು ಹೆಮ್ಮೆಯಿಂದ ನುಡಿದರು.
ಮಕ್ಕಳ ಬಗ್ಗೆ ಲಕ್ಷ್ಯ ಕೊಡಬೇಕು ಅದರಲ್ಲೂ ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪಬೇಕು ಎಂದ ಅವರು ದೇಶದ ಜನರ ಆರ್ಥಿಕ ಸಬಲತೆಗೆ ಜನಧನ್ ಯೋಜನೆ ಪ್ರಾರಂಭಿಸಿದವರು ಮೋದಿ. ದೇಶಕ್ಕಾಗಿ, ಧರ್ಮಕ್ಕಾಗಿ ನಾವು ಹೋರಾಟ ಮಾಡಬೇಕು ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಮೋದಿ ಅವರ 11 ವರ್ಷದ ಸಾಧನೆಯನ್ನು ಜನರಿಗೆ ತಿಳಿಸಲು ಕ್ಷೇತ್ರದ ವೃತ್ತಿಪರರ ಸಭೆ ಏರ್ಪಡಿಸಲಾಗಿದೆ. 11 ವರ್ಷಗಳ ಹಿಂದೆ ದೇಶ ವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ನೋಡುತ್ತಿದ್ದರು. ಈಗ ಆ ಮನಸ್ಥಿತಿ ಸಂಪೂರ್ಣ ಬದಲಾಗಿದೆ. ಎಲ್ಲ ಕಡೆ ಮೋದಿ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಲಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯಾಗಿದೆ. ನಮ್ಮ ದೇಶ ಬಲಿಷ್ಠವಾಗಿದೆ ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ಮುಂದೆಯೂ ಮೋದಿ ಅವರು ಪ್ರಧಾನ ಮಂತ್ರಿಗಳಾಗಬೇಕು, ಈ ನಿಟ್ಟಿನಲ್ಲಿ ಅವರಿಗೆ ಬಹುಮತ ಕೊಡೋಣ ಎಂದು ಹೇಳಿದರು. ತರೀಕೆರೆ ಪಟ್ಟಣದ ಬಿ.ಎಚ್.ರಸ್ತೆ ಅವೈಜ್ಞಾನಿಕವಾಗಿದೆ. ಚತುಷ್ಪದ ಹೋಗಿ ದ್ವಿಪಥ ರಸ್ತೆಯಾಗುತ್ತಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ ಮೋದಿ ಪ್ರಧಾನಿಯಾದ 11 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. 178 ರಾಷ್ಟ್ರಗಳಲ್ಲಿ ಭಾರತದ ಯೋಗಾಸನ ಶಿಬಿರಗಳು ನಡೆಯುತ್ತಿದೆ. ನೆರೆ ರಾಷ್ಟ್ರಗಳಿಗೂ ಕೋವಿಡ್ ಸಂದರ್ಭದಲ್ಲಿ ಮೋದಿ ಸಹಾಯ ಮಾಡಿದರು, ಕೋವಿಡ್ ಲಸಿಕೆಯನ್ನು ಬೇರೆ ಬೇರೆ ರಾಷ್ಟ್ರಗಳಿಗೂ ನೀಡಿದರು, ದೇಶದ ಶಕ್ತಿಯನ್ನು ಇದೀಗ ಮೋದಿ ತೋರಿಸಿದ್ದಾರೆ, ದೇಶವನ್ನು ಇನ್ನಷ್ಟು ಮುನ್ನೆಡಸಬೇಕು ಎಂದು ಹೇಳಿದರು.ಭಾರತೀಯ ಜನತಾ ಪಾರ್ಟಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ವಿಕಸಿತ ಭಾರತ ಅಮೃತ ಕಾಲ, ಪ್ರಕೋಷ್ಟ ಜಿಲ್ಲಾ ಸಂಚಾಲಕ ಈಶ್ವರಹಳ್ಳಿ ಮಹೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು. ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.
-28ಕೆಟಿಆರ್.ಕೆ 15ಃ
ತರೀಕೆರೆಯಲ್ಲಿ ಬಾರತೀಯ ಜನತಾ ಪಾರ್ಟಿಯಿಂದ ನಡೆದ ವೃತ್ತಿಪರರ ಸಭೆ ಉದ್ಘಾಟನೆಯನ್ನು ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ನೆರವೇರಿಸಿದರು. ಶಿಕ್ಷಣ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ, ಮುಖ್ಯ ವಕ್ತಾರ ಎಂ.ಜಿ.ಭಟ್, ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಪ್ರಕೋಷ್ಟ ಜಿಲ್ಲಾ ಸಂಚಾಲಕ ಈಶ್ವರಹಳ್ಳಿ ಮಹೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ ಇದ್ದರು.