ವಿದ್ಯಾರ್ಥಿಗಳು ರಾಷ್ಟ್ರದ ಐಕ್ಯತೆ, ಸೌಹಾರ್ಧತೆ ಜತೆಗೆ ದೇಶ ಪ್ರೇಮ ಬೆಳಸಿಕೊಳ್ಳಿ
ಗಂಗಾವತಿ: ವಿದ್ಯಾರ್ಥಿಗಳಿಗೆ ರಾಷ್ಟ್ರ ಭಕ್ತಿ ಅವಶ್ಯ ಎಂದು ಕೃಷಿ ಋಷಿ ಶ್ರೀಘನಮಠ ಶಿವಯೋಗಿ ಪ್ರೌಢಶಾಲೆ ಅಧ್ಯಕ್ಷ ಎಚ್.ಎಂ. ಗುರುಪಾದಸ್ವಾಮಿ ಕರೆ ನೀಡಿದರು.
ತಾಲೂಕಿನ ಮರಳಿ ಗ್ರಾಮದ ಕೃಷಿ ಋಷಿ ಶ್ರೀಘನಮಠ ಶಿವಯೋಗಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ವಿದ್ಯಾರ್ಥಿಗಳು ರಾಷ್ಟ್ರದ ಐಕ್ಯತೆ, ಸೌಹಾರ್ಧತೆ ಜತೆಗೆ ದೇಶ ಪ್ರೇಮ ಬೆಳಸಿಕೊಳ್ಳಬೇಕೆಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕೆಂದರು.
ಈ ವೇಳೆ ಶಾಂತವೀರಯ್ಯ ಸ್ವಾಮಿ, ಷಣ್ಮುಖಪ್ಪ ಆಚಾರ ನರಸಾಪುರ, ಮುಖ್ಯೋಪಾಧ್ಯಯ ಮೌನೇಶ್ ಬಡಿಗೇರ್ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.