ನೇಹಾ ಹಿರೇಮಠ ಹತ್ಯೆ ಆರೋಪಿ ಕಾಲೇಜಿನಿಂದ ಅಮಾನತು

| Published : Feb 01 2025, 12:04 AM IST

ಸಾರಾಂಶ

ಪಿ.ಸಿ. ಜಾ​ಬೀನ್‌ ಸೈನ್ಸ್‌ ಕಾ​ಲೇ​ಜಿನ ಪ್ರಿ​ನ್ಸಿ​ಪಾ​ಲರು ಶು​ಕ್ರ​ವಾರ ಆ​ರೋಪಿ ಫ​ಯಾಜ್‌ ನಾಯ್ಕನನ್ನು ಅ​ಮಾ​ನ​ತು​ಗೊ​ಳಿಸಿ ಆ​ದೇಶ ಹೊ​ರ​ಡಿ​ಸಿ​ದ್ದಾರೆ. ಇದರಿಂದ ಫಯಾಜ್‌ ಬಿಸಿಎ ಪರೀಕ್ಷೆಯಲ್ಲಿ ಕೆಲ ವಿಷಯಗಳಲ್ಲಿ ಫೇಲ್‌ ಆಗಿದ್ದ. ಈಗ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲದಂತಾಗಿದೆ.

ಹು​ಬ್ಬ​ಳ್ಳಿ:

ಹಾ​ಡ​ಹ​ಗಲೇ ಕಾ​ಲೇಜು ಕ್ಯಾಂಪ​ಸ್‌​ನಲ್ಲಿ ವಿ​ದ್ಯಾ​ರ್ಥಿನಿ​ ನೇಹಾ ಹಿರೇಮಠಳನ್ನು ಚಾ​ಕು​ವಿ​ನಿಂದ ಇ​ರಿದು ಬ​ರ್ಬ​ರ​ವಾ​ಗಿ ಹ​ತ್ಯೆ​ಗೈ​ದ ಆ​ರೋ​ಪಿ ಫ​ಯಾಜ್‌ ನಾಯ್ಕನನ್ನು ಪಿಸಿ ಜಾ​ಬೀನ್‌ ಸೈನ್ಸ್‌ ಕಾ​ಲೇಜಿ​ನಿಂದ ಅ​ಮಾ​ನ​ತು​ಗೊ​ಳಿಸಿ ಶು​ಕ್ರ​ವಾರ ಆ​ದೇಶ ಹೊ​ರ​ಡಿಸ​ಲಾ​ಗಿದೆ.

ದೇಶಾ​ದ್ಯಂತ ತೀವ್ರ ಸಂಚ​ಲನ ಸೃಷ್ಟಿಸಿದ್ದ ವಿ​ದ್ಯಾ​ರ್ಥಿನಿ ನೇಹಾ ಹಿ​ರೇ​ಮಠ ಕೊಲೆ ಪ್ರ​ಕ​ರಣದ ಆ​ರೋ​ಪಿ ಫಯಾಜ್‌ ನಾಯ್ಕ ಜಾಬಿನ್‌ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಆತ ಹತ್ಯೆಗೈದು ಜೈಲು ಸೇರಿದ್ದರೂ ಆತನ ನೋಂದಣಿ, ದಾಖಲಾತಿ ಕಾ​ಲೇಜು ಈ ವರೆಗೂ ಮುಂದು​ವರಿ​ಸಿತ್ತು. ಈ ಮಾ​ಹಿತಿ ತಿ​ಳಿದ ಶ್ರೀ​ರಾ​ಮ​ಸೇನೆ ಮು​ಖ್ಯ​ಸ್ಥ ಪ್ರ​ಮೋದ ಮು​ತಾ​ಲಿಕ್‌ ಶು​ಕ್ರ​ವಾರ ಕಾ​ಲೇ​ಜಿಗೆ ಭೇಟಿ ನೀಡಿ ಪ್ರಿ​ನ್ಸಿ​ಪಾ​ಲ್‌ ಅ​ವ​ರಿಗೆ ಘೇ​ರಾವ್‌ ಹಾ​ಕಿ​ ತೀವ್ರ ತ​ರಾ​ಟೆಗೆ ತೆ​ಗೆ​ದು​ಕೊಂಡ​ರು. ಕೊ​ಲೆ​ಗ​ಡು​ಕ​ನಿಗೆ ಶಿ​ಕ್ಷ​ಣ​ದಲ್ಲಿ ಮುಂದು​ವ​ರಿ​ಯುವ ಯಾವ ಅ​ರ್ಹತೆ ಇಲ್ಲ. ಆ​ದರೆ, ಘ​ಟನೆ ನ​ಡೆದ ತ​ತ್‌​ಕ್ಷ​ಣ​ದ​ಲ್ಲಿಯೇ ಆ​ತ​ನನ್ನು ವ​ಜಾ​ಗೊ​ಳಿ​ಸಿ​ದ್ದರೆ, ಕಾ​ಲೇ​ಜಿನ ಕೀರ್ತಿ ಮ​ತ್ತಷ್ಟು ಹೆ​ಚ್ಚು​ತ್ತಿತ್ತು. ಕಾ​ಲೇ​ಜಿನ ಈ ಕ್ರಮ ಖಂಡ​ನೀ​ಯ​ವಾ​ಗಿದ್ದು, ಈ ಕೂ​ಡ​ಲೇ ಆ​ರೋ​ಪಿ​ಯನ್ನು ಕಾ​ಲೇ​ಜಿ​ನಿಂದ ಅ​ಮಾ​ನ​ತು​ಗೊ​ಳಿ​ಸ​ಬೇ​ಕೆಂದು ಒತ್ತಾಯಿಸಿದರು.

ಇ​ದ​ರ ಬೆ​ನ್ನಲ್ಲೆ ಎ​ಚ್ಚೆತ್ತ ಪಿ.ಸಿ. ಜಾ​ಬೀನ್‌ ಸೈನ್ಸ್‌ ಕಾ​ಲೇ​ಜಿನ ಪ್ರಿ​ನ್ಸಿ​ಪಾ​ಲರು ಶು​ಕ್ರ​ವಾರ ಆ​ರೋಪಿ ಫ​ಯಾಜ್‌ ನಾಯ್ಕನನ್ನು ಅ​ಮಾ​ನ​ತು​ಗೊ​ಳಿಸಿ ಆ​ದೇಶ ಹೊ​ರ​ಡಿ​ಸಿ​ದ್ದಾರೆ. ಈ ವಿಷಯವನ್ನು ಬಳಿಕ ಮಾಧ್ಯಮಗಳಿಗೆ ಮುತಾಲಿಕ ತಿಳಿಸಿದರು. ಫಯಾಜ್‌ ಬಿಸಿಎ ಪರೀಕ್ಷೆಯಲ್ಲಿ ಕೆಲ ವಿಷಯಗಳಲ್ಲಿ ಫೇಲ್‌ ಆಗಿದ್ದ. ಈಗ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲದಂತಾಗಿದೆ.

ಈ ವೇಳೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದೇವಟಗಿ, ಉಪಾಧ್ಯಕ್ಷ ಗುಣಧರ ದಡೋತಿ, ಬಸು ದುರ್ಗದ, ಪ್ರವೀಣ ಮಾಳದಕರ ಸೇರಿದಂತೆ ಇತರರು ಇದ್ದರು.