ಶಿಡ್ಲಘಟ್ಟ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಸಮೀಪ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ದಿಢೀರ್ ದಾಳಿ ನಡೆಸಿ, 7 ಮಂದಿಯನ್ನು ಬಂಧಿಸಿದೆ.ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ಪಣಕ್ಕೆ ಇಟ್ಟಿದ್ದ ₹2,02,800 ನಗದು, 7 ಮೊಬೈಲ್ ಫೋನ್‌ಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ. ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಿದ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಗ್ರಾಮಾಂತರ ಠಾಣೆಯ ಪಿ.ಎಸ್‌.ಐ ಸುನೀಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಬಂಧಿತರನ್ನು ದೇವರಾಜ್ ಕೆ. (43) ಚನ್ನರಾಯಪಟ್ಟಣ, ದೇವನಹಳ್ಳಿ ತಾಲೂಕು ಮುನಿಕೃಷ್ಣ ಕೆ.ಎಂ. (53) ಕಸಗುಟ್ಟಹಳ್ಳಿ, ಚಿಕ್ಕಬಳ್ಳಾಪುರ ತಾಲೂಕು ಶ್ರೀನಿವಾಸ (27) ದಿನ್ನಹಳ್ಳಿ, ಗುಡಿಬಂಡೆ ಮಂಜುನಾಥರೆಡ್ಡಿ ಕೆ.ಆರ್. (46) ಕೊನಂಪಲ್ಲಿ, ಚಿಂತಾಮಣಿ ಮನೋಜ್ (27) ಹನುಮಂತಪುರ, ಶಿಡ್ಲಘಟ್ಟ ಗೋವಿಂದಪ್ಪ (65) ವೆಂಕಟಗಿರಿಕೋಟೆ, ದೇವನಹಳ್ಳಿ ತಾಲೂಕು ಹಾಗೂ ನಿಖಿಲ್ (31) ತಾತಹಳ್ಳಿ (ಹಾಲಿ ವಾಸ ಬಸವಾಪಟ್ಟಣ, ಶಿಡ್ಲಘಟ್ಟ) ಎಂದು ಗುರುತಿಸಲಾಗಿದೆ.ಸುದ್ದಿ ಚಿತ್ರ ೧ ಶಿಡ್ಲಘಟ್ಟ ತಾಲೂಕಿನ ಬಸವಾಪಟ್ಟಣ ಗ್ರಾಮದ ಸಮೀಪ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಎಸ್‌.ಪಿ ವಿಶೇಷ ತಂಡ ದಿಢೀರ್ ದಾಳಿ ನಡೆಸಿ, 7 ಮಂದಿಯನ್ನು ಬಂಧಿಸಿದೆ.