ರಾ​ಜ್ಯ​ಶಾ​ಸ್ತ್ರ ಅ​ಧ್ಯ​ಯ​ನಕ್ಕೆ ಹೆ​ಚ್ಚಿನ ಪ್ರಾ​ಶಸ್ತ್ಯ ಅಗತ್ಯ: ಪ್ರೊ.​ಧ​ರ್ಮ

| Published : Sep 24 2024, 01:56 AM IST

ರಾ​ಜ್ಯ​ಶಾ​ಸ್ತ್ರ ಅ​ಧ್ಯ​ಯ​ನಕ್ಕೆ ಹೆ​ಚ್ಚಿನ ಪ್ರಾ​ಶಸ್ತ್ಯ ಅಗತ್ಯ: ಪ್ರೊ.​ಧ​ರ್ಮ
Share this Article
  • FB
  • TW
  • Linkdin
  • Email

ಸಾರಾಂಶ

ರಾ​ಜ್ಯ​ಶಾಸ್ತ್ರ ​ಅ​ಧ್ಯ​ಯ​ನ​ಕ್ಕೆ ಹೆ​ಚ್ಚಿನ ಪ್ರಾಶಸ್ತ್ಯ ನೀ​ಡುವ ಅಗತ್ಯವಿದೆ ಎಂದು ಮಂಗ​ಳೂರು ವಿವಿ ಕು​ಲ​ಪತಿ ಪ್ರೊ.​ಪಿ.​ಎ​ಲ್‌. ​ಧರ್ಮ ಹೇ​ಳಿದ್ದಾರೆ. ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಉ​ದ್ಘಾ​ಟನಾ ಸ​ಮಾ​ರಂಭದ ಅ​ಧ್ಯ​ಕ್ಷತೆ ವ​ಹಿಸಿ ಅ​ವರು ಮಾ​ತ​ನಾ​ಡಿ​ದರು.

ಕನ್ನಡಪ್ರಭ ವಾರ್ತೆ ಮಂಗ​ಳೂ​ರು

ರಾ​ಜ್ಯ​ಶಾಸ್ತ್ರ ​ಅ​ಧ್ಯ​ಯ​ನ​ಕ್ಕೆ ಹೆ​ಚ್ಚಿನ ಪ್ರಾಶಸ್ತ್ಯ ನೀ​ಡುವ ಅಗತ್ಯವಿದೆ ಎಂದು ಮಂಗ​ಳೂರು ವಿವಿ ಕು​ಲ​ಪತಿ ಪ್ರೊ.​ಪಿ.​ಎ​ಲ್‌. ​ಧರ್ಮ ಹೇ​ಳಿದ್ದಾರೆ.

ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಉ​ದ್ಘಾ​ಟನಾ ಸ​ಮಾ​ರಂಭದ ಅ​ಧ್ಯ​ಕ್ಷತೆ ವ​ಹಿಸಿ ಅ​ವರು ಮಾ​ತ​ನಾ​ಡಿ​ದರು.

ಮಂಗ​ಳೂರು ವಿಶ್ವವಿ​ದ್ಯಾ​ನಿಲಯ ವ್ಯಾ​ಪ್ತಿಯ ಕಾ​ಲೇ​ಜು​ಗ​ಳಲ್ಲಿ ರಾ​ಜ್ಯ​ಶಾ​ಸ್ತ್ರ ವಿ​ಭಾ​ಗ​ವನ್ನು ಬೆ​ಳೆ​ಸುವ ನಿ​ಟ್ಟಿ​ನಲ್ಲಿ ಎಲ್ಲ ರೀ​ತಿಯ ಸ​ಹ​ಕಾರ ನೀ​ಡ​ಲಾ​ಗು​ವುದು ಎಂದ ಅವರು, ವಿವಿಯಲ್ಲಿ ಅ​ನೇ​ಕ ಸ​ವಾ​ಲು​ಗ​ಳಿವೆ. ಆ​ಡ​ಳಿ​ತಾ​ತ್ಮ​ಕ​ವಾಗಿ ಸ​ರಿ​ಪ​ಡಿ​ಸ​ಬ​ಹು​ದಾದ ಎ​ಲ್ಲ ಸ​ಮ​ಸ್ಯೆ​ಗ​ಳಿಗೆ ಪ​ರಿ​ಹಾರ ಕಂಡು​ಕೊ​ಳ್ಳು​ವು​ದಕ್ಕೆ ಮೊ​ದಲ ಆದ್ಯ​ತೆ ನೀ​ಡು​ತ್ತೇನೆ. ಅ​ನೇಕ ಕಾ​ಲೇ​ಜು​ಗ​ಳಲ್ಲಿ ಮುಚ್ಚಿ ಹೋ​ಗಿ​ರುವ ಕಲಾ ವಿ​ಭಾ​ಗ​ವನ್ನು ಮರು ಆ​ರಂಭಿ​ಸಲು ಪ್ರ​ಯತ್ನಪ​ಡು​ತ್ತೇ​ನೆ ಎಂದು ಭರವಸೆ ನೀಡಿದರು.

1.80 ಲ​ಕ್ಷಕ್ಕೂ ಅ​ಧಿಕ ಮಂದಿ ವಿವಿ ವ್ಯಾಪ್ತಿಯ ಕಾ​ಲೇ​ಜು​ಗ​ಳಲ್ಲಿ ಅ​ಧ್ಯ​ಯನ ಮಾ​ಡು​ತ್ತಿದ್ದು, ಎ​ಲ್ಲರ ಹಿ​ತಾ​ಸ​ಕ್ತಿ​ಯನ್ನು ಗ​ಮ​ನ​ದ​ಲ್ಲಿ​ಟ್ಟು​ಕೊಂಡು, ಸ​ರ್ಕಾರ ಮ​ಟ್ಟ​ದಲ್ಲಿ ಆ​ಗ​ಬೇ​ಕಿ​ರುವ ಕೆ​ಲಸ ಕಾ​ರ್ಯ​ಗ​ಳಿಗೆ ಪ್ರ​ಯ​ತ್ನ​ಪಡುವುದಾಗಿ ತಿಳಿಸಿದರು.

ಮಂಗ​ಳೂರು ವಿ​ವಿ ರಾ​ಜ್ಯ​ಶಾಸ್ತ್ರ ವಿಭಾ​ಗದ ನಿ​ವೃತ್ತ ಪ್ರಾ​ಧ್ಯಾ​ಪಕ ಪ್ರೊ.ವ​ಲೇ​ರಿ​ಯನ್‌ ರೋ​ಡ್ರಿ​ಗಸ್‌ ನೂ​ತನ ಸಂಘ​ವನ್ನು ಉ​ದ್ಘಾ​ಟಿಸಿ, ರಾ​ಜ್ಯ​ಶಾಸ್ತ್ರ ವಿ​ಭಾ​ಗದಲ್ಲಿ ಅ​ಧ್ಯ​ಯನ ಮಾ​ಡಿದ ವಿ​ದ್ಯಾ​ರ್ಥಿ​ಗ​ಳಿಗೆ ಕೇ​ವಲ ಬೋ​ಧನಾ ವೃತ್ತಿ ಮಾ​ತ್ರ​ವ​ಲ್ಲದೆ, ಅ​ನೇಕ ಅ​ವ​ಕಾ​ಶ​ಗಳಿ​ವೆ. ಅ​ವು​ಗ​ಳನ್ನು ಸ​ಮ​ರ್ಪಕ ರೀ​ತಿ​ಯಲ್ಲಿ ಬ​ಳಕೆ ಮಾ​ಡಿ​ಕೊ​ಳ್ಳ​ಬೇಕು ಎಂದರು.

ನಿ​ವೃತ್ತ ಪ್ರಾ​ಧ್ಯಾ​ಪ​ಕ​ರಾದ ಪ್ರೊ.ಜೆ.​ಎ​ಸ್‌. ​ಸ​ದಾ​ನಂದ, ​ಪ್ರೊ. ರಾ​ಜಾ​ರಾಮ ತೋ​ಳ್ಪಾಡಿ, ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಮು​ಖ್ಯ​ಸ್ಥ​ ಪ್ರೊ. ​ಜ​ಯ​ರಾಮ್‌ ಅ​ಮೀನ್‌ ಮಾ​ತ​ನಾ​ಡಿ​ದರು. ಸಂಘದ ಖ​ಜಾಂಜಿ ಪ್ರ​ವೀಣ್‌ ಬಂಗೇರ ಇದ್ದರು.

ಕುಲಪತಿ ಪ್ರೊ.​ಪಿ.​ಎ​ಲ್‌. ​ಧ​ರ್ಮ, ರಾ​ಜ್ಯ​ಶಾಸ್ತ್ರ ವಿಭಾ​ಗದಲ್ಲಿ ಪ್ರಾ​ಧ್ಯಾ​ಪ​ಕ​ರಾಗಿ ಸೇವೆ ಸ​ಲ್ಲಿ​ಸಿ ನಿ​ವೃತ್ತರಾ​ದ ಪ್ರೊ.​ವ​ಲೇ​ರಿ​ಯನ್‌ ರೋ​ಡ್ರಿಗ​ಸ್‌, ಪ್ರೊ.ಜೆ.​ಎ​ಸ್‌.​ ಸ​ದಾ​ನಂದ, ​ಪ್ರೊ.ರಾ​ಜಾ​ರಾಮ ತೋ​ಳ್ಪಾಡಿ, ಹಳೆ ವಿ​ದ್ಯಾರ್ಥಿ ಸಂಘದ ಅ​ಧ್ಯಕ್ಷ ಝೇ​ವಿ​ಯರ್‌ ಡಿ​ಸೋ​ಜ, ವಿ​ಭಾ​ಗದ ಕ​ಚೇ​ರಿ​ಯಲ್ಲಿ ಕಾರ್ಯ ನಿರ್ವಹಿಸಿ ನಿ​ವೃ​ತ್ತ​ರಾದ ಮಂಜು​ನಾಥ ಹಾಗೂ ಚಂದ್ರ​ಶೇ​ಖರ್‌ ಅ​ವ​ರನ್ನು ಸ​ನ್ಮಾ​ನಿ​ಸ​ಲಾ​ಯಿ​ತು.

ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಅ​ಧ್ಯಕ್ಷ ಝೇ​ವಿ​ಯರ್‌ ಡಿ​ಸೋಜ ಪ್ರಾ​ಸ್ತಾ​ವಿ​ಕ​ವಾಗಿ ಮಾ​ತ​ನಾಡಿ, ಸ್ವಾ​ಗ​ತಿ​ಸಿ​ದರು. ಕಾ​ರ್ಯ​ದರ್ಶಿ ಪ್ರೊ. ​ದ​ಯಾ​ನಂದ್‌ ನಾಯ್ಕ್‌ ವಂದಿ​ಸಿ​ದರು. ಕಾ​ರ್ಯ​ಕಾರಿ ಸ​ಮಿತಿ ಸ​ದ​ಸ್ಯ​ರಾದ ಪ​ತ್ರ​ಕರ್ತ ಆ​ರ್‌.​ಸಿ.​ಭಟ್‌ ಹಾಗೂ ಡಾ.ರೋಸ್‌ ವೀರಾ ಡಿ​ಸೋಜ ನಿ​ರೂ​ಪಿ​ಸಿ​ದ​ರು.