ಉಡುಪಿಯಲ್ಲಿ ತಳ್ಳು ಗಾಡಿಗಳಿಗೆ ನಿರ್ಬಂಧ, ಗೂಡಂಗಡಿಗಳಿಗೆ ಏಕರೂಪ: ಪ್ರಭಾಕರ ಪೂಜಾರಿ

| Published : Dec 31 2024, 01:01 AM IST

ಉಡುಪಿಯಲ್ಲಿ ತಳ್ಳು ಗಾಡಿಗಳಿಗೆ ನಿರ್ಬಂಧ, ಗೂಡಂಗಡಿಗಳಿಗೆ ಏಕರೂಪ: ಪ್ರಭಾಕರ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಬಜೆಟ್​ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಿಂದ ಗುಂಡಿಬೈಲು ಕಡೆಗೆ ಹೋಗುವವರಿಗೆ ಫ್ರೀ ಲೆಫ್ಟ್ ಮಾಡಿಕೊಡಲಾಗುವುದು. ಯೂ-ಟರ್ನ್​ ಇರುವ ಕಡೆಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರ ನಡೆಸದಂತೆ ನಿರ್ಬಂಧಿಸಲಾಗುವುದು ಎಂದು ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.ಸೋಮವಾರ ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಬಜೆಟ್​ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗುಂಡಿಬೈಲು, ಆಭರಣ ರಸ್ತೆ, ಬನ್ನಂಜೆ ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುವವರಿಗೆ ನೋಟಿಸ್​ ನೀಡಲಾಗುವುದು. ಸೂಕ್ತ ಜಾಗದಲ್ಲಿ ವಹಿವಾಟು ನಡೆಸುವಂತೆ ಸೂಚಿಸಲಾಗುವುದು. ನಗರದಲ್ಲಿ ಗೂಡಂಗಡಿಗಳಿಗೆ ಏಕರೂಪ ಡಿಸೈನ್​ ನೀಡಲಾಗುವುದು ಎಂದು ಹೇಳಿದರು.ಪ್ರಸ್ತುತ ನಗರದ ವಿವಿಧೆಡೆ ಅಳವಡಿಸಿರುವ ಬೃಹತ್​ ಸಿಗ್ನಲ್​ ಕಂಬಗಳಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು, ಕಲ್ಸಂಕದಲ್ಲಿ ವೈಜ್ಞಾನಿಕವಾಗಿ ಸಿಗ್ನಲ್​ ಲೈಟ್​ ಹಾಕಲಾಗುವುದು. ಇದಕ್ಕೆ 60ರಿಂದ 70 ಲಕ್ಷ ರು. ವೆಚ್ಚ ಅಂದಾಜಿಸಲಾಗಿದೆ ಎಂದರು.ನಗರಸಭಾ ಸದಸ್ಯೆ ಸರಿತಾ ಹರೀಶ್ ​ರಾಮ್​ ಮಾತನಾಡಿ, ನಗರಸಭೆ ಗುರುತಿಸಿರುವ ಬ್ಲಾಕ್​ ಸ್ಪಾಟ್​ಗಳಲ್ಲಿ ಕಸತಂದು ಹಾಕುವವರನ್ನು ಪತ್ತೆ ಹಚ್ಚಲು ಸಿಸಿಟಿವಿ ಅಳವಡಿಸುವಂತೆ ಆಗ್ರಹಿಸಿದರು.ಸದಸ್ಯ ಮಂಜುನಾಥ ಮಣಿಪಾಲ ಮಾತನಾಡಿ, ಮಣಿಪಾಲದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಬಸ್​ ನಿಲ್ದಾಣದಿಂದ ಈಶ್ವರನಗರದ ವರೆಗೆ ಫ್ಲೈ ಓವರ್​ ನಿರ್ಮಿಸಿದರೆ ಉತ್ತಮ. ಮಣಿಪಾಲದಲ್ಲಿ ಸಂತೆ ಮಾರುಕಟ್ಟೆಗೆ ಜಾಗ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸುವಂತೆ ಮನವಿ ಮಾಡಿದರು.ಸದಸ್ಯ ವಿಜಯ ಕೊಡವೂರು ಮಾತನಾಡಿ, ನಿಟ್ಟೂರು ಎಸ್‌ಟಿಪಿ ಮೇಲ್ದರ್ಜೆಗೆ ಏರಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್​ ಕಲ್ಮಾಡಿ, ಲೆಕ್ಕಾಧಿಕಾರಿ ಸಿ.ಆರ್​. ದೇವಾಡಿಗ ಉಪಸ್ಥಿತರಿದ್ದರು.