ಸಾರಾಂಶ
ಉಜಿರೆಯಿಂದ ಸಾಗುವ ರಸ್ತೆ ಮುಂಡಾಜೆ ಸೀಟಿನ ವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಶನಿವಾರ ಮುಂಜಾನೆ ಸುರಿದ ಭಾರಿ ಮಳೆ ಕೃಷಿಕರಲ್ಲಿ ಸಂತಸ ತಂದಿದೆ. ಕಳೆದ ಒಂದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ 73 ರಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯನ್ನು ಸಂಪೂರ್ಣ ಅಗೆದು ಮಣ್ಣಿನ ರಸ್ತೆಯಾಗಿಸಿದ್ದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಧೂಳುಮಯವಾಗಿತ್ತು. ಇದೀಗ ಏಕಾಏಕಿ ಮಳೆ ಸುರಿದ ಪರಿಣಾಮ ರಸ್ತೆ ಕೆಸರುಮಯವಾಗಿರುವುದಲ್ಲದೆ ವಾಹನ ಸವಾರರು ಸ್ಕೇಟಿಂಗ್ನಲ್ಲಿ ಸಾಗಿದಂತಾಗಿದೆ.
ಶುಕ್ರವಾರ ರಾತ್ರಿ ಹಲವಾರು ದ್ವಿಚಕ್ರ ವಾಹನ ಬಿದ್ದು ಅಘಾತವಾಗಿದ್ದು, ಶನಿವಾರ ಮುಂಜಾನೆ ಮಳೆಗೆ ಸಂಪೂರ್ಣ ಸಂಚಾರ ಅಯೋಮಯವಾಗಿದೆ. ರಸ್ತೆ ನಿರ್ಮಿಸುವಾಗ ಒಂದು ಬದಿ ರಸ್ತೆ ನಿರ್ಮಿಸಿ ಬಳಿಕ ಮತ್ತೊಂದು ಭಾಗ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಎಲ್ಲ ರಸ್ತೆಯನ್ನು ಮಣ್ಣು ರಸ್ತೆಯಾಗಿಸಿದ್ದು ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಚಿಂತಾಜನಕವಾಗಿದೆ. ಉಜಿರೆಯಿಂದ ಸಾಗುವ ರಸ್ತೆ ಮುಂಡಾಜೆ ಸೀಟಿನ ವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.