ಶಿವಾಜಿ ಆಡಳಿತ ನಮಗೆಲ್ಲ ಆದರ್ಶ: ಮಾಜಿ ಶಾಸಕ ಪ್ರತಾಪಗೌಡ

| Published : Feb 20 2024, 01:49 AM IST

ಶಿವಾಜಿ ಆಡಳಿತ ನಮಗೆಲ್ಲ ಆದರ್ಶ: ಮಾಜಿ ಶಾಸಕ ಪ್ರತಾಪಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಉಳಿವಿಗಾಗಿ ಶೌರ್ಯ, ರಾಷ್ಟ್ರಭಕ್ತಿ ಮತ್ತು ಅತ್ಯುತ್ತಮ ಆಡಳಿತ ನೀಡಿದ್ದು, ನಮಗೆಲ್ಲ ಆದರ್ಶವಾಗಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಹಿಂದೂ ದೇವಾಲಯಗಳು ಅಳಿಯದೆ ಉಳಿದಿರಲು ಶಿವಾಜಿ ಮಹಾರಾಜರ ಆಡಳಿತ ಹಾಗೂ ರಾಷ್ಟ್ರಭಕ್ತಿ ಕಾರಣವಾಗಿದೆ ಎಂದರು.

ಯಲ್ಲೋಜಿರಾವ್ ಕೊರೆಕರ್, ಅಶೋಕ ಠಾಕೂರು, ಪ್ರಸನ್ನ ಪಾಟೀಲ, ಶರಣಬಸವ ಸೊಪ್ಪಿಮಠ, ಅಭಿಜಿತ್ ಮಾಲಿಪಾಟೀಲ, ಮೌನೇಶ ನಾಯಕ, ಸತ್ಯನಾರಯಣ ಠಾಕೂರು, ವಿಜಯ ಕೊರೆಕರ್, ಸುಭಾಷ ಕೊರೆಕರ್, ಶರಣಗೌಡ ಪಾಟೀಲ ಹಾಗೂ ಇತರರು ಇದ್ದರು.