ಕನ್ನಡಪ್ರಭ ವಾರ್ತೆ ಇಂಡಿ

ಮನೆ ಮನೆಗೆ ಹೋಗಿ ಎಸ್ಐಆರ್ ಮಾಡಬೇಕಾದ ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಜನರನ್ನು ಕರೆಸಿ ಎಸ್ಐಆರ್ ಫಾರ್ಮ ವಿತರಣೆ ಮಾಡಿರುವ ಘಟನೆ ವರದಿಯಾಗಿದೆ.ನಗರದ ಸ್ಟಾರ್ ಫಂಕ್ಷನ್ ಹಾಲ್ ನಲ್ಲಿ ಎಸ್ಐಆರ್ ಫಾರ್ಮ ವಿತರಣೆ, ಫಾರ್ಮ ತುಂಬುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ. ಫಂಕ್ಷನ್ ಹಾಲ್ ಗೆ ಜನರನ್ನು ಕರೆಸಿ ಅಧಿಕಾರಿಗಳು ಎಸ್ಐಆರ್ ಕಾರ್ಯ ಮಾಡಿದ್ದಾರೆ. ಎಸ್ಐಆರ್ ಗೆ ನೇಮಿಸಿದ ಅಧಿಕಾರಿಗಳು ಮನೆ ಮನೆಗೆ ಬರುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.