ಸಾರಾಂಶ
ಕರ್ನಾಟಕದಿಂದ 22 ಜನ ಚಾರಣಕ್ಕೆ ಹೋಗಿದ್ದರು. ಅದರಲ್ಲಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ವಿನಾಯಕ ಹಾಗೂ ಸುಜಾತಾ ಎಂಬ ದಂಪತಿ ಕೂಡ ಇದ್ದಾರೆ.
ಹುಬ್ಬಳ್ಳಿ:
ಉತ್ತರಾಖಂಡದಲ್ಲಿ ನಡೆದ ಹಿಮಪಾತದಿಂದ ಮೃತಪಟ್ಟ 9 ಜನರಲ್ಲಿ ಹುಬ್ಬಳ್ಳಿ ಮೂಲದ ಇಬ್ಬರಿದ್ದಾರೆ.ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ದಂಪತಿಯೇ ಉತ್ತರಾಖಂಡಕ್ಕೆ ಚಾರಣಕ್ಕೆ ಹೋಗಿ ಮೃತಪಟ್ಟವರು.
ಆಗಿದ್ದೇನು?ಕರ್ನಾಟಕದಿಂದ 22 ಜನ ಚಾರಣಕ್ಕೆ ಹೋಗಿದ್ದರು. ಅದರಲ್ಲಿ ಹವಾಮಾನ ವೈಪರೀತ್ಯದಿಂದ 9 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ವಿನಾಯಕ ಹಾಗೂ ಸುಜಾತಾ ಎಂಬ ದಂಪತಿ ಕೂಡ ಇದ್ದಾರೆ.
ಈ ದಂಪತಿ ಮೂಲತಃ ಹುಬ್ಬಳ್ಳಿಯ ಉಣಕಲ್ನವರು. ವಿನಾಯಕ ಹಾಗೂ ಸುಜಾತಾ ಇಬ್ಬರು ಬಿವಿಬಿ ಕಾಲೇಜ್ನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ.ವಿನಾಯಕ ಅವರದು 1991ರ ಬ್ಯಾಚ್ ಆಗಿದ್ದರೆ, ಸುಜಾತಾ 1994ರ ಬ್ಯಾಚ್. ಈ ದಂಪತಿಗೆ ಇಬ್ಬರು ಮಕ್ಕಳಿದ್ದು ಇವರ ಕುಟುಂಬ ಬೆಂಗಳೂರಲ್ಲಿ ನೆಲೆಸಿದೆ. ಹುಬ್ಬಳ್ಳಿಯಲ್ಲಿ ವಿನಾಯಕ ಅವರ ಸಹೋದರಿಯೊಬ್ಬರು ನೆಲೆಸಿದ್ದಾರೆ. ಈ ದಂಪತಿ ಕರ್ನಾಟಕ ಚಾರಣಿಗರ ಅಸೋಸಿಯೇಷನ್ನ ಸದಸ್ಯರಾಗಿದ್ದಾರೆ. ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ನ ಟ್ರಸ್ಟಿ ಕೂಡ ಹೌದು. ಆಗಾಗ ಚಾರಣಕ್ಕೆಂದು ಬೇರೆ ಬೇರೆ ಸ್ಥಳಗಳಿಗೆ ತೆರಳುತ್ತಿದ್ದರು. ಇದೀಗ ಉತ್ತರಾಖಂಡಕ್ಕೆ ತೆರಳಿದ್ದರು. ಆದರೆ ಅಲ್ಲಿನ ಹವಾಮಾನ ವೈಪರೀತ್ಯದಿಂದ ಈ ದುರ್ಘಟನೆ ನಡೆದಿದೆ.
ಇವರ ಪಾರ್ಥಿವ ಶರೀರ ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿನ ಬನಶಂಕರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿನಾಯಕ ಅವರ ಸ್ನೇಹಿತ ಗಂಗಾಧರ ವಾಲಿ ತಿಳಿಸಿದ್ದಾರೆ.ಬಿವಿಬಿ ಕಾಲೇಜ್ನ ಅವರ ಸ್ನೇಹಿತರು, ಕುಟುಂಬದ ಸದಸ್ಯರು ಕಂಬನಿ ಮಿಡಿದಿದ್ದಾರೆ.