ಸಂಸ್ಥೆಯ ಅಭಿವೃದ್ಧಿಗೆ ಸಿಬ್ಬಂದಿ ಕಾರ್ಯ ಶ್ಲಾಘನೀಯ: ಅಜಯಕುಮಾರ ಸರನಾಯಕ

| Published : Jun 08 2025, 02:39 AM IST

ಸಂಸ್ಥೆಯ ಅಭಿವೃದ್ಧಿಗೆ ಸಿಬ್ಬಂದಿ ಕಾರ್ಯ ಶ್ಲಾಘನೀಯ: ಅಜಯಕುಮಾರ ಸರನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸು ಸಂಸ್ಥೆಗಳು ಸ್ಥಿತಿವಂತರ ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಹಿತವನ್ನೂ ಸಹ ಕಾಪಾಡುವತ್ತ ಗಮನ ಹರಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಹಣಕಾಸು ಸಂಸ್ಥೆಗಳು ಸ್ಥಿತಿವಂತರ ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಹಿತವನ್ನೂ ಸಹ ಕಾಪಾಡುವತ್ತ ಗಮನ ಹರಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

ಬಾಗಲಕೋಟ ಜಿಲ್ಲಾ ಹಟಗಾರ ಪತ್ತಿನ ಸಹಕಾರಿ ಬ್ಯಾಂಕ್ ಮಹಾಲಿಂಗಪುರ ಪಟ್ಟಣದ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿಯಲ್ಲಿ ಕರ್ತವ್ಯ ಪ್ರಜ್ಞೆ, ನಿಷ್ಠೆ ಅತ್ಯವಶ್ಯ.ಹಟಗಾರ ಸಮುದಾಯದ ಈ ಬ್ಯಾಂಕ್ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ಸಂಘದ ಶಾಖೆ ಉದ್ಘಾಟಿಸಿ ಮಾತನಾಡಿದ ನಂತರ ಸಹಜಾನಂದ ಶ್ರೀಗಳು, ಬ್ಯಾಂಕ್ ಗಳೆಂದರೆ ಡ್ಯಾಂಗಳಿದ್ದಂತೆ. ಜಲಾಶಯಗಳು ಫಸಲು ಬೆಳವಣಿಗೆಗೆ ಸಹಕಾರಿಯಾಗುತ್ತವೆಯೋ ಹಾಗೆಯೇ ಎಲ್ಲ ವರ್ಗಗಳ ಜನರಿಗೆ ಆರ್ಥಿಕ ಸಹಕಾರ ಹರಿದು ಹೋಗಬೇಕು. ಇದರಿಂದ ಬಡವ, ಮಧ್ಯಮ ವರ್ಗಗಳ ಜನರು ಆರ್ಥಿಕ ಸಬಲತೆ ಹೊಂದಿ ಬ್ಯಾಂಕ್ ಗಳು ಕೂಡ ಅಭಿವೃದ್ಧಿ ಹೊಂದುತ್ತವೆ ಎಂದರು.

ನಂತರ ಬಾಗಲಕೋಟ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಡಿಸಿಸಿ ಬ್ಯಾಂಕ್ ಮುರುಗೇಶ ಕಡ್ಲಿಮಟ್ಟಿ,ಜಿಲ್ಲಾ ಹಟಗಾರ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಸಿಂಹಾಸನ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಪುರಸಭೆ ಸದಸ್ಯ ಬಸವರಾಜ ಚಮಕೇರಿ, ಹಿರಿಯರಾದ ಅಶೋಕ ಅಂಗಡಿ, ಲಕ್ಕಪ್ಪ ಚಮಕೇರಿ, ಜಿ ಎಸ್. ಗೊಂಬಿ, ಮಲ್ಲಪ್ಪ ಭಾವಿಕಟ್ಟಿ, ಗುರುಪಾದ ಅಂಬಿ, ಶ್ರೀಶೈಲಪ್ಪ ಡಬಾಡಿ, ಭೀಮಸಿ ಮಗದುಮ, ಬಸವರಾಜ ರಾಯರ, ರಾಮು ಭದ್ರಣ್ಣವರ ಸೇರಿದಂತೆ ನಿರ್ದೇಶಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.