ಸಾರಾಂಶ
ನರಗುಂದ:
ಸಮಾಜದಲ್ಲಿ ಪುರಷನ ಹಾಗೆ ಮಹಿಳೆ ಕೂಡ ಎಲ್ಲ ರಂಗದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾಳೆ. ಆದರೆ ಕೆಲವು ಮಹಿಳೆಯರು ಮೇಲೆ ದೌರ್ಜನ್ಯ ನೆಡೆಯುತ್ತಿದ್ದು, ಅದನ್ನು ತಡಗಟ್ಟಬೇಕಾಗಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕ ಜಗತ್ತು ನಾಯಕ ಕಣವಿ ಹೇಳಿದರು.ಅವರು ಸೋಮವಾರ ತಾಲೂಕಿನ ಚಿಕ್ಕ ನರಗುಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸಹಾಯಕ ಸರ್ಕಾರಿ ಅಭಿಯೋಜಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಚಿಕ್ಕನರಗುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟುವಿಕೆಯ ಅಂತಾರಾಷ್ಟ್ರೀಯ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸಲು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಬದ್ಧತೆಗೆ ಅನುಗುಣವಾಗಿ ಪೋರ್ಟಲ್ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ದೂರುಗಳನ್ನು ಪರಿಹರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು, ಸಾಮಾಜಿಕ ಅಸಮಾನತೆ, ಮಹಿಳೆಯರ ಹಾಗೂ ಬಾಲಕಿಯರ ಸಬಲೀಕರಣಕ್ಕೆ ಕಾನೂನುಬದ್ಧ ಚೌಕಟ್ಟುಗಳನ್ನು ನಿರ್ಮಿಸುವುದು ಬಹಳ ಮುಖ್ಯವಾಗಿದೆ. ಇವೆಲ್ಲದರಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಸಬಲರಾಗಬೇಕು ಎಂಬುದು ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನದ ಪ್ರಮುಖ ಉದ್ಧೇಶವಾಗಿದೆ ಎಂದರು.
ಡಾ. ಸಹನಾ ಪಿಳ್ಳೆ, ಪಿ.ಎಸ್. ಹುಂಬಿ, ಎಸ್.ಕೆ. ಹರಪನಹಳ್ಳಿ, ಜೆ.ಸಿ. ಬೋಗಾರ, ಕಾವೇರಿ ಹತ್ತಿಮರದ, ಬಿ.ವೈ. ಸತ್ಯಂನವರ, ಎಂ.ವೈ. ಕುರಬನಾಳ, ಎಸ್.ಪಿ. ಹಿರೇಮಠ, ಎಸ್.ಬಿ. ಜಗಲಿ, ಸಾವಿತ್ರಿ ಮಾರಪ್ಪನವರ, ಸಂತೋಷ ಅಂಬಿಗೇರ, ರವಿ ಕುರಬರ ಹಾಗೂ 80ಕ್ಕೂ ಹೆಚ್ಚು ಅಂಗನವಾಡಿ ಶಿಕ್ಷಕಿಯರು ಇದ್ದರು.