ಸಾರಾಂಶ
ಹೊಸತೋಟ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ 42ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಈಚೆಗೆ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಹೊಸತೋಟ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ 42ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಈಚೆಗೆ ಆಚರಿಸಲಾಯಿತು.ಜಮಾತ್ ಪ್ರಧಾನ ಕಾರ್ಯದರ್ಶಿ ಸಲೀಂ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿ, ದೇಶದ ಏಕತೆ, ಭದ್ರತೆ ವಿಚಾರ ಬಂದಾಗ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರ ರಕ್ಷಣೆಗೆ ಮುಂದಾಗಬೇಕೆಂದರು.
ಇದೇ ಸಂದರ್ಭ ಮಾದಕ ವಸ್ತುಗಳ ಬಳಕೆ ನಿಷೇಧಿಸುವಂತೆ ಆಗ್ರಹಿಸಿ ಮತ್ತು ಮಾದಕ ವಸ್ತು ಬಳಸದಿರುವ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕಾಶ್ಮೀರದ ಪಹಲ್ಗಾಮ್ನಲ್ಲಿ ಈಚೆಗೆ ಮೃತರಾದವರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಎಸ್ಜೆಎಂ ಅಧ್ಯಕ್ಷ ಮುನೀರ್ ಸಹದಿ, ಎಸ್ವೈಎಸ್ ಬ್ರಾಂಚ್ ಅಧ್ಯಕ್ಷ ಬಷೀರ್, ಎಸ್ಎಸ್ಎಫ್ ಅಧ್ಯಕ್ಷ ಸಿದ್ಧಿಕ್, ಕಲ್ಕಂದೂರು ಮಸೀದಿ ಧರ್ಮಗುರು ಸಮ್ಮದ್ ನಿಜಾಮಿ, ಪದಾಧಿಕಾರಿಗಳು ಇದ್ದರು.