ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಮೇಟಿ ಮಾತನಾಡುವ ಸಂದರ್ಭದಲ್ಲಿ ತಂದೆಯ ನೆನೆದು ಕಣ್ಣೀರು ಹಾಕಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಮೇಟಿ ಮಾತನಾಡುವ ಸಂದರ್ಭದಲ್ಲಿ ತಂದೆಯ ನೆನೆದು ಕಣ್ಣೀರು ಹಾಕಿದರು. ಈ ಎಲ್ಲ ನಾಯಕರು ನಮ್ಮ ತಂದೆಯ ಜೊತೆಗಿದ್ದವರು. ಈಗ ನಮ್ಮ ಜೊತೆಗೆ ನಿಂತಿದ್ದಾರೆ. ನಾನು ಹೆಚ್ಚು ಮಾತನಾಡೋದಿಲ್ಲ, ನಮ್ಮ ನಾಯಕರು ಮಾತಾಡುತ್ತಾರೆ. ನನ್ನ ಸಹೋದರ ಉಮೇಶನನ್ನು ಗೆಲ್ಲಿಸಿಕೊಡಿ ಎಂದು ಮಲ್ಲಿಕಾರ್ಜುನ ಮೇಟಿ ಭಾವುಕರಾದರು. ವೇದಿಕೆಯಲ್ಲೇ ಮೇಟಿ ಮಕ್ಕಳು ಕಣ್ಣೀರಿಟ್ಟರು. ತಂದೆಯನ್ನು ನೆನೆದು ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ಬಾಯಕ್ಕ ಮೇಟಿ ಕಣ್ಣೀರು ಹಾಕಿದರು. ಜನರ ಮುಂದೆ ಮಂಡಿಯೂರಿ ಕೈಮುಗಿದು ಪಕ್ಷದ ಗೆಲವಿಗೆ ಮಕ್ಕಳು ಮನವಿ ಮಾಡಿದರು.