ಹೂತಿಟ್ಟ ಕಾಡುಕೋಣ ಶವ ಪತ್ತೆ ಹಚ್ಚಿದ ಅರಣ್ಯ ಅಧಿಕಾರಿಗಳು

| Published : Mar 18 2024, 01:48 AM IST

ಸಾರಾಂಶ

ಭದ್ರಾವತಿ ತಾಲೂಕಿನ ಅರಣ್ಯ ವ್ಯಾಪ್ತಿಯ ಶ್ರೀನಿವಾಸಪುರ ಸಮೀಪದ ಜಮೀನಿನಲ್ಲಿ ಮೃತಪಟ್ಟಿದ್ದ ಕಾಡುಕೋಣ ಶವ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾನುವಾರ ಯಶಸ್ವಿಯಾಗಿದ್ದಾರೆ.

ಭದ್ರಾವತಿ: ತಾಲೂಕಿನ ಅರಣ್ಯ ವ್ಯಾಪ್ತಿಯ ಶ್ರೀನಿವಾಸಪುರ ಸಮೀಪದ ಜಮೀನಿನಲ್ಲಿ ಮೃತಪಟ್ಟಿದ್ದ ಕಾಡುಕೋಣ ಶವ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾನುವಾರ ಯಶಸ್ವಿಯಾಗಿದ್ದಾರೆ.

ಮಾವಿನಕೆರೆ ಸರ್ವೆ ನಂ.14ರ ಭತ್ತದ ಗದ್ದೆಯಲ್ಲಿ ಸುಮಾರು 6 ವರ್ಷದ ಕಾಡುಕೋಣವನ್ನು ಮಣ್ಣು ತೆಗೆದು, ಹೂತು ಹಾಕಲಾಗಿತ್ತು. ಎರಡ್ಮೂರು ದಿನಗಳ ಹಿಂದೆ ಜಮೀನಿಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಈ ಕಾಡುಕೋಣ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಕಾಡುಕೋಣ ಹೂತಿರುವ ಮಾಹಿತಿ ಮೇರೆಗೆ ಸ್ಥಳೀಯ ಅರಣ್ಯ ಸಿಬ್ಬಂದಿಗೆ ತಕ್ಷಣ ಕಾರ್ಯಾಚರಣೆ ಕೈಗೊಂಡರು. ಸ್ಥಳಕ್ಕೆ ಬಾರಂದೂರು ಪಶು ವೈದ್ಯಾಧಿಕಾರಿ ಡಾ. ಮಧುಸೂದನ್ ಹಾಗೂ ವಲಯ ಅರಣ್ಯಾಧಿಕಾರಿ ಬಿ.ಆರ್. ದಿನೇಶ್‌ಕುಮಾರ್ ಮತ್ತು ಉಪ ವಲಯ ಅರಣ್ಯಾಧಿಕಾರಿ ಅಣ್ಣಾ ನಾಯ್ಕ ತಂಡ ಮಹಜರು ಕಾರ್ಯ ಕೈಗೊಂಡರು. ಈ ಸಂಬಂಧ ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

- - - -ಡಿ17-ಬಿಡಿವಿಟಿ2:

ಭದ್ರಾವತಿ ಮಾವಿನಕೆರೆ ಸರ್ವೆ ನಂ.14ರ ಭತ್ತದ ಗದ್ದೆಯಲ್ಲಿ ಮಣ್ಣು ತೆಗೆದು, ಹೂತು ಹಾಕಲಾಗಿದ್ದ 6 ವರ್ಷದ ಕಾಡುಕೋಣ ಶವವನ್ನು ಭಾನುವಾರ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಪತ್ತೆ ಮಾಡಿ, ಮಹಜರು ನಡೆಸಿದರು.